ಮೈಸೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಈಗಾಗ್ಲೇ ದೂರು ದಾಖಲಾಗಿದೆ. ಹೈಕೋರ್ಟ್ ಮಂಗಳವಾರ ನೀಡಿದ ತೀರ್ಪಿನ ಪ್ರತಿಯೊಂದಿಗೆ ದೂರುದಾರ ಪ್ರದೀಪ್ ಕುಮಾರ್ ನಿನ್ನೆ(ಬುಧವಾರ) ಲೋಕಾಯುಕ್ತಾ ಕಚೇರಿಗೆ ಆಗಮಿಸಿ ಸಿಎಂ ವಿರುದ್ಧ FIR ದಾಖಲಿಸುವಂತೆ ಒತ್ತಾಯ ಮಾಡಿದರು.ಇನ್ನು ಇದೇ ಸಂದರ್ಭದಲ್ಲಿ ದೂರುದಾರ ಪ್ರದೀಪ್ ಕುಮಾರ್ಗೆ ಮೈಸೂರಿನ ಜೆಡಿಎಸ್ ನಾಯಕರು ಸಾಥ್ ನೀಡಿದರು.
ಈ ಹಿಂದೆಯೇ ಸಿಎಂ ವಿರುದ್ಧ ಲೋಕಾಯುಕ್ತಕ್ಕೆ ಪ್ರದೀಪ್ ಕುಮಾರ್ ದೂರು ನೀಡಿದ್ದರಾದ್ರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳೋದಾಗ್ಲಿ ಎಫ್.ಐ.ಆರ್ ರಿಜಿಸ್ಟರ್ ಮಾಡೋದಾಗ್ಲಿ ಆಗಿರಲಿಲ್ಲ. ಇದೀಗ ನ್ಯಾಯಾಲಯದ ತೀರ್ಪಿನ ಪ್ರತಿಯ ಜೊತೆಗೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ. ಇದೇ ವೇಳೆ ಲೋಕಾಯುಕ್ತ ಆಫೀಸ್ ನಲ್ಲಿ ದೊಡ್ಡ ಹೈಡ್ರಾಮಾ ನಡೆದುಹೋಯ್ತು. ದೂರು ಪಡೆದಿರೋ ಲೋಕಾಯುಕ್ತ SP ಸ್ವೀಕೃತಿ ಪತ್ರ ಕೊಟ್ಟಿದ್ದರೂ, ಈ ವರೆಗೆ ಹಿಂಬರಹ ಕೊಟ್ಟಿಲ್ಲ. ಹೀಗಾಗಿ ಹಿಂಬರಹ ನೀಡುವಂತೆ ಪ್ರದೀಪ್ ಬಿಗಿಪಟ್ಟು ಹಿಡಿದಿದ್ದಾರೆ ಅಲ್ಲದೆ ಹಿಂಬರರಹ ಕೊಡುವ ಮುನ್ನಾ ಯಾವುದೇ ಕಾರಣಕ್ಕೂ ಕಚೇರಿ ಬಿಟ್ಟು ಹೋಗಲ್ಲ ಅಂತ ಹಠ ಮಾಡಿದ್ರು. ಇದಕ್ಕೆ ಜೆಡಿಎಸ್ ನಿಯೋಗದ ಇತರೆ ಸದಸ್ಯರು ಸಾಥ್ ನೀಡಿದ್ರು. ಕಡೆಗೆ 3 ದಿನ ಗಡವು ಕೊಟ್ಟ SP ಮಾತಿಗೆ ಬೆಲೆಕೊಟ್ಟು ಕಚೇರಿಯಿಂದ ಎಲ್ಲರೂ ತೆರಳಿದ್ರು.