ಪ್ರತಿನಿಧಿ ವರದಿ ನಂಜನಗೂಡು
ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಕ್ಷಿಣಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲಕ್ಕೆ ಭಕ್ತರಿಂದ ದೇಣಿಗೆ ಹರಿದುಬಂದಿದ್ದು, ಹುಂಡಿ ಎಣಿಕೆ ಕಾರ್ಯದಲ್ಲಿ 1.69,69,867 ಕೋಟಿ ರೂ. ನಗದು, 134 ಗ್ರಾಂ ಚಿನ್ನ ಹಾಗೂ 2ಕೆಜಿ 350 ಗ್ರಾಂ ಬೆಳ್ಳಿ ಲಭ್ಯವಾಗಿದೆ.
ಮಂಗಳವಾರ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.
—————————
ಎಣಿಕೆ ಕಾರ್ಯ ಎರಡು ಬಾರಿ ಬಂದಿತ್ತು.
ಸಿಬ್ಬಂದಿಗಳು-ಸಿಬ್ಬಂದಿ