ಅನಂತ ವಿದ್ಯಾನಿಕೇತನ ಶಾಲೆಯ ಐಸಿಎಸ್ಸಿಯಲ್ಲಿ ಶೇ.೧೦೦ರಷ್ಟು ಫಲಿತಾಂಶ
೨೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ | ಶಾಲಾಡಳಿತದಿಂದ ಅಭಿನಂದನೆ
ದೇವನಹಳ್ಳಿ: ತಾಲೂಕಿನ ಅತ್ತಿಬೆಲೆ ಸಮೀಪದ ಅನಂತ ವಿದ್ಯಾನಿಕೇತನ ಶಾಲೆಯೂ ಸೋಮವಾರ ಹೊರಬಿದ್ದ ಐಸಿಎಸ್ಸಿ ಪಠ್ಯಕ್ರಮದ ೧೦ನೇ ತರಗತಿ (ಐಸಿಎಸ್ಸಿ)ಯ ಫಲಿತಾಂಶದಲ್ಲಿ ಶೇ.೧೦೦ರಷ್ಟು ಶಾಲೆಯ ಮಕ್ಕಳು ತೇರ್ಗಡೆಯಾಗುವುದರ ಮೂಲಕ ಸಾಧನೆ ಮಾಡಿದೆ.
ಶಾಲೆಯ ೮೭ ವಿದ್ಯಾರ್ಥಿಗಳ ಪೈಕಿ ೨೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ೪೮ ಮಂದಿ ಪ್ರಥಮ, ೧೩ ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಗೌಡ (ಶೇ.೯೬.೮೩), ಯುಕ್ತ.ಎಚ್.ಆರ್ (ಶೇ.೯೬), ಚೇತಸ್ಗೌಡ.ಡಿ (೯೬), ವಿಶ್ವಾಸ್.ಆರ್.(೯೫.೧೭), ಜಿತಿನ್ಗೌಡ.ಎನ್ (೯೫) ಪಡೆದುಕೊಂಡಿರುತ್ತಾರೆ.
ಶಾಲೆಯ ಕಾರ್ಯದರ್ಶಿ ಎ.ವಿ.ಕೆಂಪೇಗೌಡ ಮಾತನಾಡಿದರು. ಈ ವೇಳೆ ಶಾಲೆಯ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಮುಖ್ಯಶಿಕ್ಷಕರು ಪದ್ಮಜಾ.ವಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.