ಪ್ರತಿನಿಧಿ ವರದಿ ಮಡಿಕೇರಿ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬೊಳ್ಳುಮಾಡು ಗ್ರಾಮದ ಮಾತಂಡ ಕುಟುಂಬಸ್ಥರ ಗದ್ದೆಯಲ್ಲಿ ಆ.14ರಂದು ಬೇಲ್ನಮ್ಮೆ ಆಯೋಜಿಸಲಾಗಿದೆ.
ಬೆಳಗ್ಗೆ 9.30 ಗಂಟೆಯಿಂದ ಆರಂಭಗೊಳ್ಳಲಿದ್ದು, ಓಟಾಕ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ. ಓಟಾಕ ಓಟದಲ್ಲಿ ಪುರುಷರು, ಸ್ತ್ರೀಯರು, ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ.
ಪುರುಷ ಹಾಗೂ ಸ್ತ್ರೀಯರ ವಿಭಾಗದ ಪ್ರಥಮ ವಿಜೇತರಿಗೆ ಕೋರಿಕೊಡೆ, 2000ರೂ., ದ್ವಿತೀಯ 1500 ರೂ. ಹಾಗೂ ತೃತೀಯ 1000 ರೂ. ಹಾಗೂ ಸ್ಮರಣಿಕೆ, ಅಭಿನಂದನಾ ಪತ್ರ, ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರಥಮ 1500 ರೂ., ದ್ವಿತೀಯ 1000 ರೂ. ಹಾಗೂ ತೃತೀಯ 700 ಸ್ಮರಣಿಕೆ, ಅಭಿನಂದನಾ ಪತ್ರ ನೀಡಲಾಗುವುದು.
ಹಗ್ಗ ಜಗ್ಗಾಟದಲ್ಲಿ ಪುರುಷರು ಹಾಗೂ ಸ್ತ್ರೀಯರು ಸೇರಿ 2 ವಿಭಾಗಗಳಲ್ಲಿ ನಡೆಯಲಿದ್ದು, ಹಗ್ಗ ಜಗ್ಗಾಟದಲ್ಲಿ ಪ್ರಥಮ ಬಹುಮಾನವಾಗಿ 10 ಸಾವಿರ ರೂ. ಹಾಗೂ ಸ್ಮರಣಿಕೆ ಅಭಿನಂದನಾ ಪತ್ರ, ದ್ವಿತೀಯ 7 ಸಾವಿರ ರೂ. ಸ್ಮರಣಿಕೆ ಅಭಿನಂದನಾ ಪತ್ರ ನೀಡಲಾಗುವುದು.
ಹಗ್ಗ ಜಗ್ಗಾಟದ ತಂಡದಲ್ಲಿ 7 ಸ್ಪರ್ಧಾರ್ಥಿಗಳಿಗೆ ಅವಕಾಶವಿರುತ್ತದೆ. ಆ.12ರ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ 08272-229074, 9900271887, 8971958996 ಗೆ ಸಂಪರ್ಕಿಸಬಹುದು.