ಪ್ರತಿನಿಧಿ ವರದಿ ವಿರಾಜಪೇಟೆ
ಐತಿಹಾಸಿಕ ಹಿನ್ನೆಲೆ ಹೊಂದಿರುವ ವಿರಾಜಪೇಟೆ ಪಟ್ಟಣದಲ್ಲಿ ಅದ್ದೂರಿಯ ಗಣೇಶೋತ್ಸವಕ್ಕೆ ತೆರೆ ಬಿದ್ದಿದ್ದು, ೨೨ ಗಣೇಶ ಮೂರ್ತಿಗಳನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಶೃಂಗರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಿ ಮುಂಜಾನೆ ೪ ಗಂಟೆಗೆ ಗೌರಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಸೆ.೭ ರಂದು ೨೨ ವಿವಿಧ ಸಮಿತಿಗಳು ಗೌರಿ ಗಣೇಶ ಮೂತಿಗಳನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾಗರೀಕರಿಗೆ ರಸದೌತಣ ನೀಡಿದ್ದಾರು.
ಪಟ್ಟಣದ ಎಲ್ಲ ಬೀದಿಗಳು, ಅಂಗಡಿ ಮಳಿಗೆಗಳು ವಿದ್ಯುತ್ ಅಲಂಕಾರದಿಂದ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದವು.
ಮಡಿಕೇರಿ, ಗೋಣಿಕೊಪ್ಪದಲ್ಲಿ ದಸರಾ ಮಹೋತ್ಸವದ ರೀತಿಯಂತೆ ವಿರಾಜಪೇಟೆಯ ಗೌರಿ ಗಣೇಶೋತ್ಸವ ಜನಪ್ರೀಯತೆ ಪಡೆದುಕೊಂಡಿದೆ. ಶೋಭಾಯಾತ್ರೆಯಲ್ಲಿ ಡಿ.ಜೆ, ಕೊಡವ ವಾಲಗ, ಕೇರಳದ ಪೂಕೋಡ್ ಬ್ಯಾಂಡ್, ಚಂಡೆ ವಾದ್ಯಗಳಿಗೆ ಸಾರ್ವಜನಿಕರನ್ನು ಹುಚ್ಚೆದ್ದು ಕುಣಿದರು.
ಜೈಭಾರತ್ ಆಟೋ ಮಾಲೀಕರ ಹಾಗೂ ಚಾಲಕರ ಸಂಘದಿಂದ ಪಟ್ಟಣದ ಕಾರು ನಿಲ್ದಾಣದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತು.
***********************************