ಗುಂಡ್ಲುಪೇಟೆ: ಲೋಕಸಭಾ ಚುನಾವಣೆ ಹಿನ್ನೆಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಎಲ್ಲ ಮತಗಟ್ಟೆ ಕೇಂದ್ರಗಳಿಗೆ ಇವಿಎಂ ಮತ ಯಂತ್ರಗಳ ಜತೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ತೆರಳಿದರು.
ಪಟ್ಟಣದ ಸೇಂಟ್ಜಾನ್ ಶಾಲೆ ಮಸ್ಟರಿಂಗ್ ಕೇಂದ್ರದಿಂದ ಮಧ್ಯಾಹ್ನ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ನೌಕರರು ಮತ್ತು ರಕ್ಷಣಾ ಸಿಬ್ಬಂದಿ ತೆರಳಿದರು. ಮಸ್ಟರಿಂಗ್ ಕೇಂದ್ರದಲ್ಲಿ ಗುರುವಾರ ಬೆಳಗ್ಗೆಯಿಂದಲೇ ನಿಗಧಿತ ಮತಗಟ್ಟೆ ಕರ್ತವ್ಯಕ್ಕೆ ನಿಯೋಜನೆ ಮಾಡುವ ಕೆಲಸ ನಡೆಯಿತು. ಊರು, ಮತಗಟ್ಟೆ ಸಂಖ್ಯೆ ಇತರೆ ವಿವರಗಳನ್ನು ನೀಡುವ ಜತೆಗೆ ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್, ಪತ್ರಗಳು ಇತರೆ ಪರಿಕರಗಳನ್ನು ನೀಡಲಾಯಿತು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ 249 ಮತಗಟ್ಟೆಗಳನ್ನು ತೆರೆದಿದ್ದು, ಪ್ರತಿ ಮತಗಟ್ಟೆಗೆ ಪಿಆರ್ಒ, ಎಪಿಆರ್ಒ, ಇಬ್ಬರು ಪಿ.ಒ ಮತ್ತು 401 ರಕ್ಷಣಾ ಸಿಬ್ಬಂದಿ ಒಳಗೊಂಡ ತಂಡ ಚುನಾವಣೆ ಕರ್ತವ್ಯಕ್ಕೆ ತೆರಳಿದರು. ಚುನಾವಣೆ ಕರ್ತವ್ಯಕ್ಕೆ ಮತಗಟ್ಟೆ ಅಧಿಕಾರಿಗಳು, ನೌಕರರು ಮತ್ತು ರಕ್ಷಣಾ ಇಲಾಖೆಯವರನ್ನು ಕರೆದೋಯ್ಯಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಘಟಕದಿಂದ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಚುನಾವಣಾ ಸಿಬ್ಬಂದಿಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಬೆಳಗ್ಗೆ ಅಲ್ಪ ಉಪಹಾರ, ಚಹಾ, ಕಾಫಿ, ಮಧ್ಯಾಹ್ನ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪೊಲೀಸರ ನಿಯೋಜನೆ: ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂಬ ಉದ್ದೇಶದಿಂದ ವಿಧಾನ ಸಭಾ ಕ್ಷೇತ್ರದ 249 ಮತಗಟ್ಟೆಗಳಿಗೂ ಪೊಲೀಸ್, ಕೆ ಎಸ್ ಆರ್ ಪಿ , ಜಿಲ್ಲಾ ಸಶಸ್ತ್ರ ಪಡೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಒಳಗೊಂಡು ರಕ್ಷಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅರಣ್ಯ ಬೂತ್ ಸಖಿ ಮತ್ತು ಅನ್ನದಾತ , ಯೂಥ್ ಬೂತ್ ಸೇರಿದಂತೆ 14 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ಚುನಾವಣೆ ಅಧಿಕಾರಿ ಡಾ.ದಯಾನಂದ್, ತಹಸೀಲ್ದಾರ್ ಮಂಜುನಾಥ್ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ಮುಂತಾದವರು ಹಾಜರಿದ್ದರು
ಫೋಟೋ ಇದೆ