ಪ್ರತಿನಿಧಿ ವರದಿ ವಿರಾಜಪೇಟೆ
ಕೊಡಗು ಜಿಲ್ಲಾ ಮಾರಾಟ ಮಹಾಮಂಡಳ ನಿಯಮಿತ(ಫೆಡರೇಷನ್) ೨೦೨೩-೨೪ನೇ ಸಾಲಿನಲ್ಲಿ ೨೫.೨೭ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ವಾಟೇರಿರ ಬೋಪಣ್ಣ ಹೇಳಿದರು.
ಪಟ್ಟಣದ ಮಹಿಳಾ ಸಮಾಜ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ೧೯೪೩ರಲ್ಲಿ ಸಂಸ್ಥೆ ಪ್ರಾರಂಭಗೊಂಡು ೮೧ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದೆ. ಕಂಜಿತಂಡ ಕೆ. ಕುಶಾಲಪ್ಪ ಸ್ಥಾಪಕ ಅಧ್ಯಕ್ಷರಾಗಿದ್ದು, ಸಂಸ್ಥೆ ಜಿಲ್ಲೆಯಾದ್ಯಂತ ಕಾರ್ಯವ್ಯಾಪಿಯನ್ನು ಹೊಂದಿದೆ. ಪ್ರಸ್ತುತ ೨೯೩೮ ಸದಸ್ಯರುಗಳಿದ್ದಾರೆ. ಸಂಸ್ಥೆಯು ೫೮.೯೦ ಲಕ್ಷ ರೂ. ಪಾಲು ಬಂಡವಾಳ ಹೊಂದಿದ್ದು, ೨೦೨೩-೨೪ ನೇ ಸಾಲಿನಲ್ಲಿ ೧೨.೭೬ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದೆ. ೮೫.೩೧ ಲಕ್ಷ ರೂ. ವ್ಯಾಪಾರ ಲಾಭ ಗಳಿಸಿ ಕೊಂಡಿದೆ. ಕಾಯ್ದಿರಿಸಿದ ಬಾಪ್ತುಗಳನ್ನು ಕಳೆದು ೨೫.೨೭ ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.೧೫ ರಂತೆ ಲಾಭಂಶ ನೀಡಲು ನಿರ್ಧರಿಸಲಾಗಿದೆ. ಸಂಘವು ವಿರಾಜಪೇಟೆ, ಗೋಣಿಕೊಪ್ಪ, ಸಿದ್ದಾಪುರ, ಶ್ರೀಮಂಗಲ ಮತ್ತು ಆರ್ಜಿಯಲ್ಲಿ ಶಾಖೆಗಳನ್ನು ಹೊಂದಿದ್ದು, ಸದಸ್ಯರಿಗೆ ಮತ್ತು ಸದಸ್ಯೇತರರಿಗೆ ಗ್ರಾಹಕ ವಸ್ತು, ರಸಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ಮತ್ತು ಕೋವಿ ತೋಟಾಗಳ ಮೂಲಕ ವಾರ್ಷಿಕವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ವ್ಯಾಪಾರವೃದ್ದಿಯೇ ಸಂಘದ ದ್ಯೇಯೋದ್ದೇಶವಾಗಿದೆ ಎಂದರು.
ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಇರುವ ಖಾಳೀ ನಿವೇಶನದಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಆರ್ಜಿ ಗ್ರಾಮದಲ್ಲಿರುವ ಖಾಲಿ ನಿವೇಶನದಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವುದು ಮುಂದಿನ ಯೋಜನೆಯಾಗಿದೆ.
ಉಪಾಧ್ಯಕ್ಷ ತಾತಂಡ ಕಾವೇರಪ್ಪ ನಿರ್ದೇಶಕ ಕಂಜಿತಂಡ ಮಂದಣ್ಣ, ಮುಲ್ಲೇಂಗಡ ಕುಟ್ಟಪ್ಪ, ಮಾಚಿಮಂಡ ವಸಂತ್, ಕೊಕ್ಕಂಡ ಬಿದ್ದಪ್ಪ, ಚೇನಂಡ ಗಿರೀಶ್ ಪೂಣಚ್ಚ, ಮೂಕೊಂಡ ಶಶಿ ಸುಬ್ರಮಣಿ, ಕುಂಬೇರ ಮನುಕುಮಾರ್, ಅಂಜಪರವಂಡ ಮಂದಣ್ಣ, ಕೂತಂಡ ಸಚಿನ್ ಕುಟ್ಟಯ್ಯ, ಪುಲಿಯಂಡ ಪೊನ್ನಣ್ಣ, ಕೆ.ಆರ್.ವಿನೋದ್, ಕರ್ತಚ್ಚಿರ ಲತಾ, ಪುಟ್ಟಿಚಂಡ ವೀಣಾ ಮಹೇಶ್, ಎಚ್.ಎನ್ ಶೇಖರ್, ಎಚ್.ಜಿ.ಆನಂದ, ಸಹಕಾರ್ಯದರ್ಶಿ ಕೆ.ಎಂ.ಚಂದ್ರಕಾಂತ್ ಉಪಸ್ಥಿತರಿದ್ದರು.