ರೇಷನ್ ಕಾರ್ಡ್ ಗೆ ಇ-ಕೆವೈಸಿ ಮಾಡಲು ಆ.31 ಕೊನೆಯ ದಿನಾಂಕವೆಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಕೆವೈಸಿ ಮಾಡಿಸಲು ಕೇವಲ ಎರಡು ದಿನಗಳು ಬಾಕಿ ಉಳಿದಿದೆ. ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿಯೊಬ್ಬರೂ ಕೂಡ ಇ-ಕೆವೈಸಿ ಮಾಡಿಸುವುದು ಕಡ್ಡಾಯವೆಂದು ಇಳಾಖೆ ತಿಳಿಸಿದೆ. ನಿಗದಿತ ದಿನಾಂಕದ ಒಳಗಾಗಿ ಮಾಡಿಸದಿದ್ದಲ್ಲಿ ಮುಂದಿ ದಿನಗಳಲ್ಲಿ ಪಡಿತರ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಪಡಿತರ ಚೀಟಿ ಹೊಂದಿರುವವರು ಆ.31 ರ ಒಳಗಾಗಿ ತಮ್ಮ ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ, ಬೆಳಗ್ಗೆ 7:00 ಯಿಂದ ರಾತ್ರಿ 9:00 ಒಳಗಡೆ ತಮ್ಮ ರೇಷನ್ ಕಾರ್ಡಿಗೆ ಇ ಕೆ ವೈ ಸಿ ಯ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದಾಗಿದೆ.
ಇ ಕೆ ವೈ ಸಿ ಎಂದರೆ ನೋ ಯುವರ್ ಕಸ್ಟಮರ್(know your customer) ಎಂದರ್ಥ. ಪಡಿತರ ಚೀಟಿಯಲ್ಲಿರುವ ಕುಟುಂದ ಸದಸ್ಯರ ಆಧಾರ್ ಕಾರ್ಡ್ ನ್ನು ರೇಷನ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸುವುದಾಗಿದೆ. ಈ ಪ್ರಕ್ರಿಯೆಯ ಮೂಲಕ ಪಡಿತರ ಚೀಟಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದು ಮತ್ತು ನಡೆಯುತ್ತಿರುವ ಹಗರಣಗಳನ್ನು ತಡೆಯುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಸದ್ಯ ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ ಕೆಲವರು ಅನಧಿಕೃತವಾಗಿ ಪಡಿತರ ಚೀಟಿಯನ್ನು ಪಡೆಯುತ್ತಿದ್ದಾರೆ. ಇದು ಹಲವಾರು ಕಡೆ ಕಂಡು ಬಂದಿದೆ. ಅಂತಹ ಅನಧಿಕೃತ ಪಡಿತರ ಚೀಟಿಯನ್ನು ಪಡೆಯುತ್ತಿರುವುದನ್ನು ತಪ್ಪಿಸುವುದು ಮತ್ತು ಸರಿಯಾದವರಿಗೆ ಹಾಗೂ ಅರ್ಹ ಕುಟುಂಬಗಳಿಗೆ ಮಾತ್ರ ಈ ರೇಷನ್ ಕಾರ್ಡನ್ನು ನೀಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಇ-ಕೆವೈಸಿ ಮಾಡಿಸಲು ಇನ್ನೆರೆಡು ದಿನಗಳಷ್ಟೇ ಬಾಕಿ ಉಳಿದಿದ್ದು, ಪಡಿತರ ಚೀಟಿ ಹೊಂದಿರುವವರು ಇನ್ನೂ ಮಾಡಿಸದಿದ್ದಲ್ಲಿ ಇಂದೇ ಈ ಕೆಲಸ ಮಾಡಿಸಿ.