ರಾಮನಗರ : ಲೋಕಸಭಾ ಸಾರ್ವತ್ರಿಕ ಚುನಾವಣೆ- 2024ಕ್ಕೆ ಸಂಬಂಧಿಸಿದಂತೆ 23- ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ 6 ಅಭ್ಯರ್ಥಿಗಳ 7 ನಾಮಪತ್ರಗಳು ತಿರಸ್ಕೃತವಾಗಿದೆ.
ಸ್ವತಂತ್ರ ಅಭ್ಯರ್ಥಿಗಳಾದ ಪ್ರದೀಪ್ ಟಿ.ವಿ 1 ನಾಮಪತ್ರ, ಶಿವಣ್ಣ 1 ನಾಮಪತ್ರ, ಬಂಡಿ ರಂಗನಾಥ ವೈ.ಆರ್. 1 ನಾಮಪತ್ರ, ಜೆ.ಟಿ.ಪ್ರಕಾಶ್ 1 ನಾಮಪತ್ರ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿ ರಾಜಣ್ಣ ಎಚ್. 2 ನಾಮಪತ್ರ, ನವ ಭಾರತ ಸೇನೆ ಪಕ್ಷದ ಅಭ್ಯರ್ಥಿ ಎನ್. ವಸಂತ ರಾವ್ ಜಗತಾಪ್ 1 ನಾಮಪತ್ರ ತಿರಸ್ಕೃತವಾಗಿದೆ.
ಒಟ್ಟು 45 ನಾಮಪತ್ರ ಸ್ವೀಕೃತಗೊಂಡಿದ್ದು, ಅದರಲ್ಲಿ 7 ನಾಮಪತ್ರಗಳು ತಿರಸ್ಕೃತಗೊಂಡು, 38 ನಾಮಪತ್ರಗಳು ಅಂಗೀಕೃತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.