ಕಾವೇರಿ ನೀರು ವಿಚಾರದಲ್ಲಿ ಸುಖಾಸುಮ್ಮನೆ ರಾಜಕೀಯವಾಗಿ ಹೇಳಿಕೆ ಕೊಡಬಾರದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಇಬ್ಬರು ಅಧಿಕಾರದಲ್ಲಿದ್ದವರು. ಅವರಿಗೂ ನ್ಯಾಯಾಲಯದ ಸ್ಥಿತಿಗಳು ಗೊತ್ತಿವೆ. ಎಲ್ಲಾ ರೀತಿಯಾಗಿ ಸಮರ್ಥವಾದ ವಾದವನ್ನ ಮಂಡಿಸಿದ್ದೇವೆ. ರಾಜಕೀಯ ಕಾರಣಕ್ಕಾಗಿ ಈ ವಿಚಾರವಾಗಿ ಏನೇನೋ ಆರೋಪ ಮಾಡಬೇಡಿ ಎಂದರು.ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗದಂತೆ ಬಂದ್ ಗಳು ನಡೆಯಲಿ. ಜನರು ಪ್ರತಿಭಟನೆ ಮಾಡುವುದು ಅವರ ಹಕ್ಕು. ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ದಸರಾದ ಮೇಲೆ ಇದರ ಕರಿಛಾಯೇ ಬೀಳುವುದಿಲ್ಲ. ಸೆ.27ಕ್ಕೆ ಸುಪ್ರೀಂಕೋರ್ಟ್ ನಲ್ಲಿ ತೀರ್ಪಿರುವ ಕಾರಣ ನಮ್ಮ ಪರವಾಗಿ ಆದೇಶ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.