ನಾಳಿನ ಬಂದ್ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರದ ಮುಂದೆ ಐದು ಒತ್ತಾಯಗಳನ್ನಿಟ್ಟಿದ್ದಾರೆ.
- ಕಾವೇರಿ ಜಲಾಶಯಗಳಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ಕೂಡಲೇ ನಿಲ್ಲಿಸಬೇಕು
- ರಾಜ್ಯ ಸರ್ಕಾರ ಕೂಡಲೇ ವಿಧಾನ ಸಭೆ ವಿಶೇಷ ಅಧಿವೇಷನ ಕರೆದು ಸಮಗ್ರ ಚರ್ಚೆ ನಡಿಸಿ, ಕಾವೇರಿ ಸಂಕಷ್ಟ ಸೂತ್ರ ಜಾರಿ ಮಾಡಿ ನೀರು ಬಿಡುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು
- ಕುರುಡು ಅದೇಶಗಳನ್ನ ಮಾಡಿ ಕರ್ನಾಟಕದ ಜನರಿಗೆ ಕಾವೇರಿ ನೀರು ನಿರ್ವಹಣಾ ಪ್ರದೀಕಾರ ಕೂಡಲೇ ಅನ್ಯಾಯ ಮಾಡುತ್ತಿದೆ. ಇದನ್ನ ಕೂಡಲೇ ರದ್ದು ಮಾಡಬೇಕು
- ಯಾವುದೇ ಪಕ್ಷದ ಸರ್ಕಾರದ ಒತ್ತಡಗಳಿಗೂ ಮಣಿಯದಂತೆ ನೂತನವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನೀರು ನಿರ್ವಹಣ ಮಂಡಳಿ ರಚಿಸಬೇಕು
- ಈ ಮಂಡಳಿಯಲ್ಲಿ ನೀರಾವರಿ ತಜ್ಞರು, ರೈತ ಪ್ರತಿನಿಧಿಗಳು, ಎಲ್ಲರೂ ಒಳಗೊಂಡತೆ ಸಮಿತಿ ರಚಿಸಬೇಕು.