ಬೆಂಗಳೂರಿನಲ್ಲಿ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ARO ಚಂದ್ರಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಖಾತೆ ಮಾಡಿಕೊಡಲು 60,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಂದ್ರಪ್ಪ 10,000 ರೂ. ಪಡೆಯುವಾಗ ARO ಚಂದ್ರಪ್ಪ ಬೀರಜ್ಜೀನವರ್ ಬಂಧಿಸಲಾಗಿದೆ. ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರಿದಿದೆ. ಇದರ ಬೆನ್ನಲ್ಲೇ ಚಂದ್ರಪ್ಪ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಿದ್ದು ಬೆಂಗಳೂರಿನ ಕೆ.ಆರ್.ಪುರಂ ನಿವಾಸದ ಮೇಲೆ ದಾಳಿ, ಪರಿಶೀಲನೆ ನಡೆಸಲಾಗುತ್ತಿದೆ. ದಾಳಿ ವೇಳೆ 5 ಲಕ್ಷ ನಗದು ಹಣ, 30×40 ಅಳತೆಯ ಫ್ಲ್ಯಾಟ್, ರಾಣೆಬೆನ್ನೂರು ತಾಲೂಕಿನಲ್ಲಿ 6 ಎಕರೆ ಜಮೀನು ದಾಖಲೆ ಪತ್ರ, ಕೆ.ಆರ್.ಪುರಂನಲ್ಲಿ ಮೂರು ಹಂತಸ್ತಿನ ಕಟ್ಟಡದ ದಾಖಲೆ ಪತ್ರ ಪತ್ತೆಯಾಗಿದೆ.