ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿಯ ಜಿಲ್ಲೆಗಳು ಇದೀಗ ಇಡೀ ದೇಶಕ್ಕೆ ಸ್ಫೂರ್ತಿದಾಯಕ ಜಿಲ್ಲೆಗಳಾಗಿ ಹೊರಹೊಮ್ಮಿವೆ. ಈ ಜಿಲ್ಲೆಗಳ ಸಾಫಲ್ಯತೆ ಮರುಪರಿಶೀಲಿಸಲು ಮುಂದಿನ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಮತ್ತೆ ನಾನು ಬರುವೆ ಎಂದು ಘೋಷಿಸಿದ್ದಾರೆ. ಈ ಮೂಲಕ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವೆ ಎಂಬ ಪರೋಕ್ಷ ಸಂದೇಶ ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ.
ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯ ಮುಂದುವರೆದ ಭಾಗವಾಗಿ ದೇಶಾದ್ಯಂತ 100 ಮಹತ್ವಾಕಾಂಕ್ಷಿಯ ವಲಯ ಅಭಿವೃದ್ಧಿ ಯೋಜನೆಗೆ ಶನಿವಾರ ಲ್ಲಿನ ಭಾರತ ಮಂಟಪಂನಲ್ಲಿ ಚಾಲನೆ ನೀಡಿ ಮಾತನಾಡಿದರು. ಅಂದರೆ ಹಿಂದುಳಿದ ವಲಯಗಳ ಅಭಿವೃದ್ಧಿಯೇ ಈ ಯೋಜನೆಯ ಗುರಿಯಾಗಿದ್ದು, ಅವನ್ನು ಮಹತ್ವಾಕಾಂಕ್ಷಿ ವಲಯಗಳು ಎಂದು ಪರಿಗಣಿಸಲಾಗಿದೆ.