ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್ ಅಗ್ನಿ ದುರಂತ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ತಮಿಳುನಾಡು ಸಚಿವರು, ಶಾಸಕರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್, ಆಹಾರ ಸಚಿವ ಸಕ್ರಪಾಣಿ ಭೇಟಿ ನೀಡಿದ್ದು, ಆಸ್ಪತ್ರೆಗೆ ತಮಿಳುನಾಡಿನ ಅರೂರು ಶಾಸಕ ಸಂಪತ್ ಕುಮಾರ್, ಶಾಸಕ ರಾಮಚಂದ್ರ ಭೇಟಿ ನೀಡಿದ್ದಾರೆ. ಹೊಸೂರು ಶಾಸಕ ವೈ ಪ್ರಕಾಶ್ ಕೂಡ ಭೇಟಿ ನೀಡಿದ್ದಾರೆ.