ಬೆಂಗಳೂರು : ಆಹಾರ ಇಲಾಖೆಯ ಆಧ್ಯಾತಾ ಹಾಗೂ ಆಧ್ಯೇತರ ಪಡಿತರ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದೆ. ಆಧ್ಯಾತ ಪಡಿತರ ಚೀಟಿ ಹಾಗೂ ಆಧ್ಯತೇತರ ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿದ್ದ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸುವ ಬಗ್ಗೆ ಸರ್ಕಾರ ನಿರ್ದೇಶನ ಹೊರಡಿಸಿದೆ. ಆಹಾರ ಇಲಾಖೆಗೆ 16/08/2023 ರವರೆಗೂ ಒಟ್ಟು 2,96,986, ಆಧ್ಯಾತ ಪಡಿತರ ಚೀಟಿಗಳು ಹಾಗೂ ಆಧ್ಯೇತರ ಪಡಿತರ ಚೀಟಿಗಾಗಿ 71410 ಅರ್ಜಿ ಸಲ್ಲಿಕೆ ಆಗಿವೆ. ಈ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ. ಅಲ್ಲದೇ ಪಡಿತರ ಚೀಟಿ ವಿತರಣೆ ಮುನ್ನ ಆಹಾರ ಇಲಾಖೆ ಕೆಲವು ಷರತ್ತು ವಿಧಿಸಿದೆ.
ಆಹಾರ ಇಲಾಖೆಯ ಷರತ್ತುಗಳು
- ಪ್ರಸ್ತುತ ಅನುಮತಿಸಿರುವ ಹೊಸ ಆಧ್ಯಾತ ಚೀಟಿಗಳ 2.96 ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳನ್ನ ಸ್ವೀಕರಿಸುವಂತಿಲ್ಲ.
- ಆದ್ಯತೇಕರ (APL) ಪಡಿತರ ಚೀಟಿಯನ್ನ ಕೋರಿ ಅರ್ಜಿ ಸಲ್ಲಿಸಿರುವ ಅರ್ಜಿಗಳ ಅನುಮೋದನೆ ನೀಡುವುದನ್ನ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.
- ಆದ್ಯಾತಾ ಪಡಿತರ ಚೀಟಿಯನ್ನ ಕೋರಿ ಸಲ್ಲಿಸಿರುವ 2.96 ಲಕ್ಷ ಅರ್ಜಿಗಳ ವಿತರಣೆ ನಂತರವು ಪ್ರಸ್ತುತ ಚಾಲ್ತಿಯಲ್ಲಿರುವ ಆದ್ಯಾತಾ / ಅಂತ್ಯೋದಯ ಪಡಿತರ ಚೀಟಿಗಳ ಸಂಖ್ಯೆಯನ್ನ ಮೀರುವಂತಿಲ್ಲ.
- ಆರು ತಿಂಗಳಿನಿಂದ ಆಹಾರ ಧಾನ್ಯ ಪಡೆಯದೇ ಇರುವ ಪಡಿತರ ಚೀಟಿಗಳನ್ನ ಅಮಾನತ್ತುಗೊಳಿಸಲು ಸಕ್ಷಮ ಪ್ರಧೀಕಾರದಿಂದ ಅನುಮೋದನೆ ಪಡೆಯಬೇಕು.
- ಆದ್ಯಾತ ಪಡಿತರ ಚೀಟಿಯನ್ನ ಕೋರಿ ಸಲ್ಲಿಕೆಯಾಗಿರುವ 2.96 ಲಕ್ಷ ಅರ್ಜಿಗಳ ವಿಲೇವಾರಿಯಿಂದಿಗೆ ಏಕಕಾಲದಲ್ಲಿ ಆರು ತಿಂಗಳ ನಿರಂತರ ಪಡಿತರವನ್ನ ಪಡೆಯದೇ ಅಧ್ಯಾತಾ ಪಡಿತರ ಚೀಟಿಯನ್ನ ಅಮಾನತುಗೊಳಿಸುವುದು.
- ಅನುಮಾನತ್ತು ಪಡಿಸಿರುವ ಚೀಟಿಗಳನ್ನ ಪುನರ್ ಸ್ಥಾಪಿಸಿವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ಖುದ್ದು ಸ್ಥಳ ಪರಿಶೀಲನೆ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ವರದಿ ನೀಡ ತಕ್ಕದ್ದು.