ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಜೊತೆಗೆ ಆಪರೇಷನ್ ಕಾಂಗ್ರೆಸ್ಗೂ ಕೈ ಹಾಕಿರುವ ರಾಜ್ಯ ನಾಯಕರು ಹಲವು ಜೆಡಿಎಸ್-ಬಿಜೆಪಿ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಿದ್ದಾರೆ (Karnataka Congress). ಇನ್ನು ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ಗೆ ಶೀಘ್ರದಲ್ಲೇ ಭರ್ಜರಿ ಸರ್ಜರಿ ಆಗಲಿದೆ. ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಲೊಕಸಭೆಗೂ ಮುನ್ನ ಹೊಸ ಮುಖಗಳಿಗೆ ಮಣೆ ಹಾಕಲು ಎಐಸಿಸಿ ಪ್ಲಾನ್ ಮಾಡಿದೆ. ಜಾತಿ ಸಮೀಕರಣಕ್ಕೆ ಮಣೆ ಹಾಕಲಾಗುತ್ತಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾನಾ ಪ್ರಯೋಗಗಳಿಗೆ ಮುಂದಾಗಿದೆ. ಸದ್ಯ ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಚಂದ್ರಪ್ಪ, ಈಶ್ವರ್ ಖಂಡ್ರೆಗೆ ರಿಲೀವ್ ಸಿಗಲಿದೆ. ಇನ್ನು ಎಐಸಿಸಿ, ರಾಜ್ಯ ಘಟಕದಿಂದಲೂ ಪರ್ಯಾಯ ಹೆಸರು ಕೇಳಿದೆ. ರಾಜ್ಯ ಕಾಂಗ್ರೆಸ್ ಘಟಕ ಜಾತಿ ಸಮೀಕರಣಕ್ಕೆ ಮಣೆ ಹಾಕುತ್ತಿದೆ. ಕೆಪಿಸಿಸಿ ಹೊಸ ಕಾರ್ಯಧ್ಯಕ್ಷರ ಸ್ಥಾನಕ್ಕೆ ನಾಲ್ವರ ಹೆಸರು ಶಿಫಾರಸ್ಸು ಮಾಡಿದೆ. ಜಿ.ಸಿ.ಚಂದ್ರಶೇಖರ್, ಅಂಜಲಿ ನಿಂಬಾಳ್ಕರ್, ವಿನಯ್ ಕುಲಕರ್ಣಿ, ವಸಂತ ಕುಮಾರ್, ವಿನಯ್ ಕುಮಾರ್ ಸೊರಕೆ ಹೆಸರು ಕಳಿಸಿದೆ.