ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ನಡೆಸಿ ಮೈತ್ರಿ ಸರ್ಕಾರ ಕೆಡವಿದ್ದ ತಂಡ ಮತ್ತೆ ಸಕ್ರಿಯವಾಗಿದೆ. ಈ ತಂಡ ಕಾಂಗ್ರೆಸ್ನ ಐವರು ಶಾಸಕರನ್ನು ಭೇಟಿ ಮಾಡಿ 50 ಕೋಟಿ ರು. ಹಣ, ಮಂತ್ರಿ ಸ್ಥಾನ, ಅಮಿತ್ ಶಾ ಭೇಟಿ ಮಾಡಿಸುವ ಆಮಿಷ ಒಡ್ಡಿದೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಗಂಭೀರ ಆರೋಪ ಮಾಡಿದ್ದಾರೆ.
ನಂತರ ಮಾತನಾಡಿದ ಗಣಿಗ ರವಿ ಮತ್ತೆ ಆಪರೇಷನ್ ಕಮಲ ಯತ್ನದ ಬಾಂಬ್ ಸಿಡಿಸಿದರು. ಈ ತಂಡದಲ್ಲಿ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಎನ್.ಆರ್.ಸಂತೋಷ್ ಜೊತೆಗೆ ಬೆಳಗಾವಿಯ ಓರ್ವ ಮಾಜಿ ಸಚಿವ, ಮೈಸೂರು ಭಾಗದ ಓರ್ವ ಮಾಜಿ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಬಿಜೆಪಿಯ ಇನ್ನಿತರೆ ನಾಯಕರುಗಳಿದ್ದಾರೆ. ಆ ತಂಡದವರು ನಮ್ಮ ಶಾಸಕರನ್ನು ಸಂಪರ್ಕಿಸಿದ ಆಡಿಯೋ, ವಿಡಿಯೋಗಳೂ ನಮ್ಮ ಬಳಿ ಇವೆ. ಅವುಗಳನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇವೆ ಎಂದರು.