ಬಾಗಲಕೋಟೆ: ದಲಿತ ಮುಖ್ಯಮಂತ್ರಿ ಬಗ್ಗೆ ಡಾ.ಜಿ.ಪರಮೇಶ್ವರ್ ಒಲವು ವಿಚಾರವಾಗಿ ಮಾತನಾಡಿದ ಸಚಿವ ಆರ್ಬಿ ತಿಮ್ಮಾಪುರ, ಯಾಕೆ ನಾನು ಸಿಎಂ ಆಗಬಾರದಾ ಎಂದು ಪ್ರಶ್ನಿಸಿ್ರು. ನನಗೆ ಸಿಎಂ ಆಗುವ ಆಸೆ ಇರಲ್ವಾ, ನನಗೆ ಆದರೆ ಬೇಡ ಅಂತೀರಾ? ಸಿಎಂ ಆಗಲು ನಿಮಗೂ, ನಮಗೂ ಆಸೆ ಇದೆ ಎಂದರು. ಕಂಕನವಾಡಿ ಗ್ರಾಮದಲ್ಲಿ ಈ ಹೇಳಿಕೆ ನೀಡಿದ್ದಾರೆ.