ಹಾಸನ: ಜಿಲ್ಲೆಯಲ್ಲಿ 44 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ, ಈ ಬಗ್ಗೆ ಡಿಸಿ, ಜಿ.ಪಂ. ಸಿಇಒ ಪರಿಶೀಲನೆ ಮಾಡಬೇಕುಬ ಎಂದು ಸಿಎಂ ಸಿದ್ದರಾಮಯ್ಯ ಅವರು ಹಾಸನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು. ಸರ್ಕಾರ ಹಣ ಕೊಡಲು ತಯಾರಿರುವಾಗ ನೀವು ಅದನ್ನು ಗಮನಿಸಬೇಕು. ಗೃಹಜ್ಯೋತಿ ಯೋಜನೆಗೂ 63 ಸಾವಿರ ಗ್ರಾಹಕರ ನೋಂದಣಿ ಆಗಬೇಕು. ಎಲ್ಲವನ್ನೂ ಗಮನಿಸಿ ಅವರು ಅರ್ಹರಿದ್ದರೆ ಮಾಡಿ ಇಲ್ಲವಾದರೆ ಕೈಬಿಡಿ ಎಂದರು.