ಬೆಳಗಾವಿಯ ನಾಗರಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕುಂದಾನಗರಿಯ ಜನತೆಗೆ ವಂದೇ ಭಾರತ್ ಎಕ್ಸ್ಪ್ರೆಸ್ ಸೌಲಭ್ಯ ಕೊನೆಗೂ ದೊರೆಯುವಂತಾಗಿದೆ. ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಬೆಳಗಾವಿಯವರೆಗೂ ವಿಸ್ತರಣೆಯಾಗುವುದು ಖಚಿತವಾಗಿದೆ. ಬೆಳಗಾವಿ ಬೆಂಗಳೂರು ವಂದೇ ಭಾರತ್ ರೈಲು ಸಂಖ್ಯೆ 20661 KSR ಬೆಂಗಳೂರು-ಬೆಳಗಾವಿ ಬೆಂಗಳೂರು ಬೆಳಗ್ಗೆ 5.45 ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1:30ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಮಧ್ಯಾಹ್ನ 1.30 ಕ್ಕೆ ರೈಲು ಸಂಖ್ಯೆ 20662 ಬೆಳಗಾವಿಯಿಂದ ಹೊರಟು- ರಾತ್ರಿ 10:30ಕ್ಕೆ ಬೆಂಗಳೂರನ್ನು ತಲುಪಲಿದೆ. ವಂದೇ ಭಾರತ ರೈಲುಗಳ ಸ್ವಚ್ಚತೆಗೆ 14 Minutes Miracle ಎಂಬ ಕಾರ್ಯಕ್ರಮವನ್ನು ಇಡೀ ದೇಶದಲ್ಲಿ ಜಾರಿಗೊಳಿಸಲಾಗಿದ್ದು, ಧಾರವಾಡ ರೈಲು ನಿಲ್ದಾಣದಲ್ಲೂ ಈ ಹೊಸ ಅಭಿಯಾನ ಆರಂಭಗೊಂಡಿದೆ.
ಒಂದು ರೈಲನ್ನು ಕೇವಲ 14 ನಿಮಿಷಗಳಲ್ಲಿ ಸ್ವಚ್ಛತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ. ಈ ಮೊದಲು ಒಂದು ಬೋಗಿ ಕ್ಲೀನ್ ಮಾಡಲು 40 ರಿಂದ 50 ನಿಮಿಷ ಸಮಯ ಬೇಕಾಗುತ್ತಿತ್ತು. ಆದರೆ ವಂದೇ ಭಾರತ ರೈಲು ಸ್ವಚ್ಛತೆಗಾಗಿ 14 ನಿಮಿಷಗಳ ಪವಾಡ ಎಂಬ ಯೋಜನೆ ಜಾರಿಗೆ ತರಲಾಗಿದೆ. ಒಂದು ಬೋಗಿಯನ್ನು ಮೂವರು ಕಾರ್ಮಿಕರು ಸ್ವಚ್ಛಗೊಳಿಸಲಿದ್ದು ಇಡೀ ರೈಲಿನ ಎಲ್ಲ ಬೋಗಿಗಳನ್ನು ಕೇವಲ 14 ನಿಮಿಷದಲ್ಲಿ ಸ್ವಚ್ಛಗೊಳಿಸಲಾಗುತ್ತದೆ.