ಪಕ್ಷದ ಹಿರಿಯರು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ಆಶ್ಚರ್ಯ ಸಂಗತಿ ಅಂತಾ ಭಾವಿಸುವೆ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಯಾರು ಏನೇ ಟೀಕೆ, ಆರೋಪ ಮಾಡಿದರೂ ತಲೆಕೆಡಿಸಿಕೊಳ್ಳಬಾರದು. ಬಸವಣ್ಣನವರು ಹೇಳಿದಂತೆ ಯಾರಾದರೂ ನಿಂದಿಸಿದರೆ ಖುಷಿಪಡಬೇಕು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜನಪರ ಕೆಲಸಗಳತ್ತ ಗಮನ ಹರಿಸಬೇಕು ಎಂದಿದ್ದಾರೆ.