ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ಇವತ್ತು ಡಿಕೆ ಶಿವಕುಮಾರ್ ಅವರ ಪಾದದಡಿ ಇದೆ. ಶಿವಕುಮಾರ್ ಅವರು ಕಾನೂನು ಬಾಹಿರ ಚಟುವಟಿಕೆ ಮಾಡಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಕನಕಪುರದ ಜನ ಒಂದುಕಾಲು ಲಕ್ಷದಲ್ಲಿ ಗೆಲ್ಲಿಸಿದಾರೆ ಅಂತಾರಲ್ಲ. ಪಾಪಾ ಅವರೆಲ್ಲಾ ಬಡತನದಲ್ಲೇ ಇದ್ದಾರೆ. ಇನ್ನೂ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿ ಇದೆ. ಅವರಿಗೂ ಈ ರೀತಿ 1400 ಕೊಟಿ ಸಂಪಾದನೆ ಎರಡು ಮೂರು ವರ್ಷದಲ್ಲಿ ಹೇಗೆ ಮಾಡುವುದು? ಎರಡೇ ವರ್ಷದಲ್ಲಿ ಅದಾಯ 30%, 40 %, 200%, 300% ಏರಿಕೆ ಮಾಡುವುದು ಹೇಗೆ ಎಂದು ಬಡವರಿಗೂ ಹೇಳಿಕೊಡಲಿ. ಬಡವರು ಪುಣ್ಯವಂತರಾಗುತ್ತಾರೆ ಎಂದರು.