ಬೆಂಗಳೂರಿನಲ್ಲಿ ಕಂಬಳ ಮಾಡುವುದು ನಮ್ಮ ಕನಸು ಇಂದು ನನಸಾಗ್ತಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ ಅಲ್ಲ, ಇದು ನಿಮ್ಮ ಕಂಬಳ ಎಂದು ಬೆಂಗಳೂರಿನಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ರೈ ಹೇಳಿದರು. ಕೋಣಗಳನ್ನ ಬೆಂಗಳೂರಿಗೆ ತರುವಾಗ ಹೆಚ್ಚಿನ ಜನರು ಸಹಕರಿಸಿದ್ದಾರೆ. ಕಾಂತಾರ ಸಿನಿಮಾ ಮೂಲಕ ಕಂಬಳ ದೇಶದೆಲ್ಲೆಡೆ ಪರಿಚಯವಾಗಿದೆ. ಇನ್ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಬಳವನ್ನ ಗುರುತಿಸುತ್ತೇವೆ. ವಿವಿಧ ಎಲ್ಲಾ ಕ್ರೀಡೆಗಳಂತೆ ಕಂಬಳ ಕೂಡಾ ಬೆಳೆಯುತ್ತೆ ಎಂದರು.