ಕಂಬಳದ ಕೆರೆಗೆ ತಳಿರು ತೋರಣ ಕಟ್ಟಿ ಶೃಂಗಾರ ಮಾಡಲಾಗಿದೆ. ರಾಜ, ಮಹರಾಜ ಹೆಸರಿನಲ್ಲಿ ಕಂಬಳದ ಕೆರೆ ರೆಡಿ ಮಾಡಲಾಗಿದೆ. ಸರಪಾಡಿ ಅಪ್ಪಣ್ಣ ನೇತ್ರತ್ವದಲ್ಲಿ ಕಂಬಳದ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. 25 ದಿನದಲ್ಲಿ ಕಂಬಳದ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಸುಮಾರು 25 ಜನ ಕಾರ್ಮಿಕರು ಸರಪಾಡಿ ಅಪ್ಪಣ್ಣಗೆ ಸಾಥ್ ನೀಡಿದ್ದಾರೆ. ಟಿವಿ 9 ಜೊತೆ ಕಂಬಳ ಟ್ರ್ಯಾಕ್ ನಿರ್ಮಾಣದ ಅನುಭವವನ್ನು ಅಪ್ಪಣ್ಣ ಹಂಚಿಕೊಂಡಿದ್ದಾರೆ. ಪ್ರಾರಂಭದಲ್ಲಿ ಬಂದಾಗ ಕಟ್ಟಡ ಕೆಡವಿದ ತ್ಯಾಜಗಳ ರಾಶಿಯಿತ್ತು. ಬಳಿಕ ನೆಲ ಹದಗೊಳಿಸಿ ಟ್ರ್ಯಾಕ್ ನಿರ್ಮಿಸಿದೆವು. ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಂಡಿದ್ದೇವೆ. ಕೋಣಗಳು ಓಡಿದ ಬಳಿಕ ಸಾಧಕ ಭಾದಕ ಗೊತ್ತಾಗುತ್ತೆ ಎಂದರು.