ಮೈಸೂರು: ತಾಲೂಕಿನ ಕೀರಾಳು ಗ್ರಾಮದಲ್ಲಿ ಚಿರತೆ ಸೆರೆಯಾಗಿದ್ದು, ಗ್ರಾಮದಲ್ಲಿ ಕಳೆದ ರಾತ್ರಿ ಬೋನ್ ಇರಿಸಲಾಗಿತ್ತು. ಹಲವು ದಿನಗಳಿಂದ ಗ್ರಾಮದ ಬಳಿ ಓಡಾಡುತ್ತಿದ್ದ ಚಿರತೆ ಇಂದು ಬೋನಿಗೆ ಸಿಕ್ಕಿಬಿದ್ದಿದೆ. ಚಿರತೆ ಓಡಾಟದಿಂದ ಗ್ರಾಮಸ್ಥರು ಅತಂಕದಲ್ಲೇ ಬದುಕುತ್ತಿದ್ದರು. ಸದ್ಯ ಗ್ರಾಮಸ್ಥರು ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.