ನಡೆದಿದ್ದು ಏನು?
ಕಲಬುರಗಿ:ಡಿಸೆಂಬರ್ 7 ರಂದು ಬೆಳಗ್ಗೆ 10:45ಕ್ಕೆ ಅಪಾರ್ಟ್ಮೆಂಟ್ನಿಂದ ಬೈಕ್ನಲ್ಲಿ ಈರಣ್ಣಗೌಡ ಹೊರಟಿದ್ದರು. ಈ ಸಮಯಕ್ಕೇ ಕಾದು ಕುಳಿತಿದ್ದ ಅವ್ವಣ್ಣ ನಾಯ್ಕೋಡಿ, ಮಲ್ಲಿನಾಥ್ ನಾಯ್ಕೋಡಿ ಮತ್ತು ಭಾಗೇಶ್ ನಾಯ್ಕೋಡಿ ಮಾರಕಾಸ್ತ್ರಗಳ ಸಮೇತ ಅಡ್ಡಗಟ್ಟಿದ್ದಾರೆ. ತಕ್ಷಣ ಅವರಿಂದ ಬಚಾವಾಗಲು ಅಪಾರ್ಟ್ಮೆಂಟ್ ಪಾರ್ಕಿಂಗ್ಗೆ ಓಡಿ ಬಂದಿದ್ದಾನೆ. ಈರಣ್ಣಗೌಡ ರಿವೋಲ್ವರ್ ತೆಗೆಯುವ ವೇಳೆಗೆ ಹಂತಕರು ಸೇರಿಕೊಂಡು ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. 3 ನಿಮಿಷಗಳ ಕಾಲ 30ಕ್ಕೂ ಹೆಚ್ಚುಬಾರಿ ಈರಣ್ಣಗೌಡನ್ನ ಕೊಚ್ಚಿ ಕೊಚ್ಚಿ ಕೊಂದಿದ್ದಾರೆ.
ಈರಣ್ಣಗೌಡ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಮೊನ್ನೆ ಅವ್ವಣ್ಣ, ಭಾಗೇಶ್, ಮಲ್ಲಿನಾಥ್ ಸೇರಿದಂತೆ ಮೂವರನ್ನ ಬಂಧಿಸಿದ್ದ ಪೊಲೀಸರು, ಇದೀಗ ಈ ಹತ್ಯೆಗೆ ರೂಪುರೇಷೆ ಸಿದ್ದಪಡಿಸಿದ್ದ ಮಾಸ್ಟರ್ ಮೈಂಡ್ ನೀಲಕಂಠರಾವ್ ಪಾಟೀಲ್ ಮತ್ತು ಆತನ ಪತ್ನಿ ಸಿದ್ದಮ್ಮ ಪಾಟೀಲ್ರನ್ನ ಪೊಲೀಸರು ತಡರಾತ್ರಿ ಅರೆಸ್ಟ್ ಮಾಡಿದ್ದಾರೆ.
ಕಳೆದ ನಾಲ್ಕು ದಿನ ಮುಂಚಿತವಾಗಿ ಈರಣ್ಣಗೌಡನ್ನ ಹತ್ಯೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ ನೀಲಕಂಠರಾವ್ ಪತ್ನಿ ಸಿದ್ದಮ್ಮಳು ಮಲ್ಲಿನಾಥ್ಗೆ 50 ಸಾವಿರ ರೂಪಾಯಿ ಹಣ ನೀಡುವುದಾಗಿ ಹೇಳಿದ್ದಳು. ಅಲ್ಲದೇ ಹತ್ಯೆಯಾದ ದಿನ ಅಂದರೆ ಡಿಸೆಂಬರ್ 7 ರಂದು ತಾವು ಖರೀದಿಸಿದ್ದ ಹೊಸ ಕಾರಿನ ಪೂಜೆ ಮಾಡಲು ನೀಲಕಂಠರಾವ್ ಪಾಟೀಲ್ ದಂಪತಿ ದೇವಲಗಾಣಗಾಪುರದ ದತ್ತನ ಸನ್ನಿಧಿಗೆ ತೆರಳಿದ್ದರು. ದತ್ತನ ಸನ್ನಿಧಿಯಲ್ಲಿ ಪೂಜೆ ಮುಗಿಸಿದ್ದ ತಕ್ಷಣ ಇತ್ತ ಮಲ್ಲಿನಾಥ್ನು ನೀಲಕಂಠರಾವ್ಗೆ ಕಾಲ್ ಮಾಡಿ ಈರಣ್ಣಗೌಡನನ್ನ ಮುಗಿಸಿರೋದಾಗಿ ಮಾಹಿತಿ ನೀಡಿದ್ದಾರೆ.
ಹತ್ಯೆಗೆ ಪ್ರತಿಯಾಗಿ 50 ಸಾವಿರ ರೂಪಾಯಿ
ಈರಣ್ಣಗೌಡ ಹತ್ಯೆ ಸುದ್ದಿ ಕಿವಿಗೆ ಬಂದು ಅಪ್ಪಳಿಸುತ್ತಲೇ ಸಂತಸಪಟ್ಟ ನೀಲಕಂಠರಾವ್ ದಂಪತಿ, ಬಳಿಕ ಕಲಬುರಗಿಗೆ ಆಗಮಿಸಿದ್ದಾರೆ. ನಂತರ ನೀಲಕಂಠರಾವ್ ಮನೆಗೆ ರಕ್ತದ ಕಲೆಯಲ್ಲೇ ಬಂದ ಹಂತಕ ಮಲ್ಲಿನಾಥ್ ನಾಯ್ಕೋಡಿ, ಈರಣ್ಣಗೌಡ ಹತ್ಯೆಗೆ ಪ್ರತಿಯಾಗಿ 50 ಸಾವಿರ ರೂಪಾಯಿ ಪಡೆದುಕೊಂಡು ಹೋಗಿದ್ದಾನೆ. ಹೀಗಾಗಿ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿವಿ ಠಾಣೆ ಪೊಲೀಸರು ನೀಲಕಂಠರಾವ್ ಮತ್ತು ಸಿದ್ದಮ್ಮಳನ್ನ ಬಂಧಿಸಿದ್ದಾರೆ.
ಅದೆನೇ ಇರಲಿ ಈಗಾಗಲೇ ಐವರು ನರಹಂತಕರನ್ನ ಬಂಧಿಸಿರುವ ಖಾಕಿಪಡೆ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಆಸ್ತಿ ಮೇಲಿನ ಆಸೆಗೆ ವಕೀಲನ ರಣಭೀಕರ ಹತ್ಯೆಗೈಯ್ದ ನರಹಂತಕರಿಗೆ ಕಠಿಣ ಶಿಕ್ಷೆಯಾಗಲಿ ಅನ್ನೊದೆ ಕುಟುಂಬಸ್ಥರ ಆಶಯವಾಗಿದೆ.