ಮೈಸೂರು: ದೇವರಾಜ ಮೊಹಲ್ಲಾದ ಬಿಡಾರಾಂ ಕೃಷ್ಣಪ್ಪ ರಸ್ತೆಯಲ್ಲಿ ಹಾಡಹಗಲಿನಲ್ಲೇ ಮಚ್ಚು ಲಾಂಗುನಿಂದ ಟೀ ಅಂಗಡಿಯಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಕಾರಿನಲ್ಲಿ ಬಂದಿದ್ದ ಏಳೆಂಟು ಮಂದಿಯ ತಂಡದಿಂದ ರಾಮ್ ದೇವ್ ಟೀ ಸ್ಟಾಲ್ ಬಳಿ ಟೀ ಕುಡಿಯುಯುತ್ತಾ ನಿಂತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆ ನಡೆದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿರುವ ದೇವರಾಜ ಠಾಣೆಯ ಪೊಲೀಸರು. ಈಗಾಗಲೇ ಟೀ ಸ್ಟಾಲ್ ಗೆ ಹೊಂದಿಕೊಂಡಿರುವ ಮನೆಯ ಮುಂಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಮೈಸೂರು ಹೃದಯ ಭಾಗದಲ್ಲಿಯೇ ಚೆಲ್ಲಾಡಿರುವ ರಕ್ತದ ಕೃತ್ಯ ನಡೆದಿರುವುದು ನಗರದ ಜನರಲ್ಲಿ ನುಡುಕ ಹಾಗೂ ತೀವ್ರ ಆತಂಕ ಸೃಷ್ಠಿಸಿದೆ.