ಪುಷ್ಪ 2’ ಕಲಾವಿದ ಜಗದೀಶ್ ಅವರನ್ನುಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪುಷ್ಪರಾಜ್ ಗೆಳೆಯ ಕೇಶವ್ ಪಾತ್ರವನ್ನು ಜಗದೀಶ್ ಪ್ರತಾಪ್ ಬಂಡಾರಿ ನಿರ್ವಹಿಸಿದ್ದರು ಆದರೆ ಈಗ ಯುವತಿಯ ಆತ್ಮಹತ್ಯೆ ಕೇಸ್ನಲ್ಲಿ ಜಗದೀಶ್ ಜೈಲು ಸೇರಿದ್ದಾರೆ.
ಹೌದು ಯುವತಿಯೊಬ್ಬರ ಖಾಸಗಿ ಫೋಟೋಗಳು ಜಗದೀಶ್ ಬಳಿ ಇದ್ದವು. ಇದನ್ನೇ ಇಟ್ಟುಕೊಂಡು ಜಗದೀಶ್ ಬ್ಲಾಕ್ಮೇಲ್ ಮಾಡುತ್ತಿದ್ದರು. ಇದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವಾಗ ಅವರು ಜಗದೀಶ್ ಹೆಸರು ಬರೆದಿಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಪೊಲೀಸರು ಜಗದೀಶ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಅವರುನ್ನು ಜೈಲಿಗೆ ಕಳುಹಿಸಲಾಗಿದೆ. ಪ್ರಕರಣ ಗಂಭೀರವಾಗಿರುವುದರಿಂದ ಜಗದೀಶ್ಗೆ ಜಾಮೀನು ಸಿಗುತ್ತಿಲ್ಲ. ಆ ಪಾತ್ರ ಇಲ್ಲದೆ ಕಥೆ ಹೇಗೆ ಮುಂದುವರಿಸಬೇಕು ಎನ್ನುವ ಚಿಂತೆ ತಂಡದವರನ್ನು ಕಾಡಿದೆ.
ಯುವತಿಯ ಆತ್ಮಹತ್ಯೆ ಕೇಸ್ನಲ್ಲಿ ಜಗದೀಶ್ ಜೈಲು ಸೇರಿದ್ದು, ಚಿತ್ರತಂಡದ ಚಿಂತೆ ಹೆಚ್ಚಿಸಿದೆ. ಅವರನ್ನು ಜೈಲಿನಿಂದ ಹೊರಗೆ ಕರೆತರಲು ಮೈತ್ರಿ ಮೂವೀ ಮೇಕರ್ಸ್ ತಮ್ಮ ಪ್ರಭಾವ ಬಳಸಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.
‘ಪುಷ್ಪ’ ಚಿತ್ರದಲ್ಲಿ ಕೇಶವ್ ಪಾತ್ರ ಗಮನ ಸೆಳೆದಿತ್ತು. ಸದಾ ಪುಷ್ಪರಾಜ್ ಜೊತೆ ಕೇಶವ್ ಕಾಣಿಸಿಕೊಳ್ಳುತ್ತಾರೆ. ಎರಡನೇ ಭಾಗದಲ್ಲೂ ಈ ಪಾತ್ರ ಮುಂದುವರಿಯಬೇಕಿತ್ತು. ನಿರ್ದೇಶಕ ಸುಕುಮಾರ್ ಕೂಡ ಈ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಆದರೆ, ಮಾಡಿದ ತಪ್ಪಿಗೆ ಜಗದೀಶ್ ಜೈಲು ಸೇರಿದ್ದಾರೆ. ಇದು ನಿರ್ಮಾಣ ಸಂಸ್ಥೆಗೆ ತಲೆನೋವಾಗಿದೆ. ಪಾತ್ರವನ್ನು ಕೈಬಿಟ್ಟು ಮುಂದುಕ್ಕೆ ಹೋಗುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಮೈತ್ರಿ ಮೂವೀ ಮೇಕರ್ಸ್ನವರು ಜಗದೀಶ್ ಅವರನ್ನು ಹೊರಗೆ ತರಲು ಪ್ರಯತ್ನಿಸಿದ್ದರು. ಆದರೆ, ಅದರಿಂದ ಸಹಾಯ ಆಗಿಲ್ಲ. ಸಂಪೂರ್ಣ ಪ್ರಭಾವ ಬಳಕೆ ಮಾಡಿದ ಹೊರತಾಗಿಯೂ ಯಾವುದೇ ಪ್ರಯೋಜನ ಆಗಿಲ್ಲ. ಈಗಾಗಲೇ ‘ಪುಷ್ಪ 2’ ಸಿನಿಮಾ ಶೂಟಿಂಗ್ ಸಾಕಷ್ಟು ಬಾರಿ ವಿಳಂಬ ಆಗಿದೆ. ಈಗ ಮತ್ತೆ ಶೂಟಿಂಗ್ ವಿಳಂಬ ಆದರೆ ಅಂದುಕೊಂಡ ಡೇಟ್ಗೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ.