ಚೆನ್ನೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಮಾಮಣ್ಣನ್’ ಚಿತ್ರದ ಅಭಿಯನಕ್ಕಾಗಿ ನಟ ವಡಿವೇಲು ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಡಿಸೆಂಬರ್ 21 ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ವಡಿವೇಲು ಅವರು ಪ್ರಶಸ್ತಿಯನ್ನು ಚಿತ್ರದ ನಿರ್ದೇಶಕ ಮಾರಿ ಸೆಲ್ವರಾಜ್ ಅವರಿಗೆ ಅರ್ಪಿಸಿದರು.ನಟ-ರಾಜಕಾರಣಿ ಉದಯನಿಧಿ ಸ್ಟಾಲಿನ್ ನಟಿಸಿದ ಮಾಮಣ್ಣನ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆಯಿತು. ಮಾಮಣ್ಣನ್ ಚಿತ್ರದ ಪ್ರಮುಖ ಪಾತ್ರಧಾರಿ ವಡಿವೇಲು ಸೇಲಂನ ಮೀಸಲು ಕ್ಷೇತ್ರದಿಂದ ದಲಿತ ಶಾಸಕನಾಗಿ ನಟಿಸಿದ್ದಾರೆ. ಉದಯನಿಧಿ ಅವರು ಶಾಸಕನ ಮಗನ ಪಾತ್ರಧಾರಿಯಾಗಿ ಜಾತಿ ವಿರೋಧಿ ಯುವಕನ ಪಾತ್ರವನ್ನು ನಿರ್ವಹಿಸಿದ್ದಾರೆ.
ಶಸ್ತಿ ಸ್ವೀಕರಿಸಿ ಮಾತನಾಡಿದ ವಡಿವೇಲು, ”ನನಗಿಂತ ಈ ಗೆಲುವು ನಿರ್ದೇಶಕ ಮಾರಿ ಸೆಲ್ವರಾಜ್ ಅವರದ್ದು. ಅವರು ಚಿಕ್ಕ ವಯಸ್ಸಿನಿಂದಲೂ ಬುದ್ಧಿಜೀವಿ. ಅವರು ಬಾಲ್ಯದಲ್ಲಿ ಎದುರಿಸಿದ ಹೋರಾಟಗಳ ಬಗ್ಗೆ ಮಾತನಾಡಿದ್ದಾರೆ ಮತ್ತು ಪ್ರತಿ ದೃಶ್ಯಕ್ಕೂ ಅವರು ಎಲ್ಲವನ್ನೂ ತೆರೆದಿಟ್ಟಿದ್ದಾರೆ. ಮಾಮಣ್ಣನ್ ತುಂಬ ಜನರನ್ನು ತಲುಪಿರುವ ಬಗ್ಗೆ ನನಗೆ ಹೆಮ್ಮೆಯ ಜೊತೆಗೆ ಸಂತೋಷವಾಗಿದೆ. ನಿರ್ದೇಶಕರು ತಮ್ಮದೇ ಆದ ನೋವು ಮತ್ತು ಬಡವರ ನೋವನ್ನು ತೋರಿಸಿದ್ದಾರೆ. ಇದು ನನ್ನ ಪ್ರಶಸ್ತಿಯಲ್ಲ, ಮಾರಿ ಸೆಲ್ವರಾಜ್ ಅವರದು. ಇದು ಉದಯನಿಧಿ ಮತ್ತು ನಿರ್ಮಾಣ ಸಂಸ್ಥೆಯ ಪ್ರಶಸ್ತಿ. ಎಲ್ಲದರ ಜೊತೆಗೆ ಇದು ಅಭಿಮಾನಿಗಳ ಪ್ರಶಸ್ತಿ” ಎಂದು ಹೇಳಿದರು.
ವಡಿವೇಲು ಅವರು ಪ್ರಧಾನವಾಗಿ ಹಾಸ್ಯ ನಟರಾಗಿದ್ದರೂ ಮಾಮಣ್ಣನ ಚಿತ್ರದಲ್ಲಿ ಗಂಭೀರವಾದ ಪಾತ್ರವನ್ನು ನಿರ್ವಹಿಸಿರುವ ಸವಾಲುಗಳನ್ನು ಈ ಸಂದರ್ಭದಲ್ಲಿ ವಿವರಿಸಿದರು. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದರು.