ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ರಸ್ತೆಯ, ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದ್ದು, ಭೀಕರವಾಗಿ ಹತ್ಯೆಯಾಗಿರೋ ಅಂಬರಾಯ ಪಟ್ಟೆದಾರ್ ನ ಪತ್ನಿಯ ತಂಗಿಯೇ ಕೊಲೆಯ ಸೂತ್ರಧಾರಿ ಎನ್ನೋ ಅಂಶ ಬೆಳಕಿಗೆ ಬಂದಿದೆ.
ತನ್ನ ಪ್ರೀತಿಗೆ ಅಡ್ಡಿಯಾಗಿದ್ದು, ಮತ್ತು ತನ್ನೊಂದಿಗೆ ಸಹಕರಿಸು ಅಂತ ಭಾವನಾದ ಅಂಬರಾಯ ಪ್ರತಿನಿತ್ಯ ಪೀಡಿಸುತ್ತಿದ್ದನಂತೆ. ಇದ್ರಿಂದ ಬೇಸತ್ತ ನಾದಿನಿ ಅಂಬಿಕಾ ತನ್ನ ಪ್ರಿಯಕರನಿಗೆ ವಿಷಯ ತಿಳಿಸಿದ್ದಳಂತೆ. ಅದಕ್ಕೊಂದು ಪರಿಹಾರ ಹುಡುಕು, ಇಲ್ಲದಿದ್ದರೇ ಆತ ನನ್ನನ್ನು ಸುಮ್ಮನ್ನೆ ಬಿಡೋದಿಲ್ಲ ಅಂದಿದ್ದಳು. ಅದರಂತಯೇ ಆವತ್ತು ಪ್ರಿಯಕರನೊಂದಿಗೆ ಸೇರಿ ಭಾವನನ್ನೆ ಹತ್ಯೆ ಮಾಡಿಸಿದ್ದಾಳೆ ಕಿರಾತಕಿ ಅಂಬಿಕಾ @ ಅಲಿಯಾಸ್ ರಾಧಿಕಾ. ಸದ್ಯ ಕೊಲೆಗಾರ್ತಿ ಅಂಬಿಕಾ ಸೇರಿದಂತೆ ಏಳು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇನ್ನು ಕೊಲೆಯಾದ ಅಂಬರಾಯ ಪಟ್ಟೆದಾರ್ ಮೂಲತಃ ಜೇವರ್ಗಿ ತಾಲೂಕಿನ ಕೂಡಿ ಗ್ರಾಮದ ನಿವಾಸಿ. ಆದ್ರೆ ಕಲಬುರಗಿ ನಗರದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಪತ್ನಿಯೊಂದಿಗೆ ವಾಸವಿದ್ದ. ಈ ಮಧ್ಯೆ 15 ದಿನಗಳ ಹಿಂದೆ ಪತ್ನಿಯ ತವರು ಮನೆ ಕಮಲಾಪುರ ತಾಲೂಕಿನ ಬೆಳಕೋಟಾ ಗ್ರಾಮದಕ್ಕೆ ಬಂದಿದ್ದ. ಪತ್ನಿಯ ಮನೆಯಲ್ಲೆ ವಾಸವಿದ್ದ. ಆವತ್ತು ಕೆಲಸಕ್ಕೆ ಹೋಗಿ ಬರ್ತಿನಿ ಅಂತ ಹೋಗಿದ್ದ ನಾಲ್ಕು ದಿನ ಆದ್ರೂ ಪತ್ತೆಯಾಗಿರಲಿಲ್ಲ. ಬಳಿಕ ನಿರ್ಜನ ಪ್ರದೇಶದಲ್ಲಿ ಶವವಾಗಿ ಬಿದ್ದಿದ್ದ. ತಕ್ಷಣವೇ ಸ್ಥಳೀಯರು ಶವ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.