ರಾಮನಗರ: ಇಂದು ಕುಮಾರಸ್ವಾಮಿ ಅವರನ್ನು ಬೆಳಗ್ಗೆ ಪ್ರತಾಪ್ ಸಿಂಹ, ಮಾಜಿ ಮುಖ್ಯಮಂತ್ರಿಯ ಬಿಡದಿ ಮನೆಯಲ್ಲಿ ಭೇಟಿಯಾದರು. ಕೈಯಲ್ಲಿ ಬೋಕೆ ಹಿಡಿದಿರುವ ಪ್ರತಾಪ್ ಸಿಂಹ ಹಿರಿಯ ನಾಯಕನ ಕಾಲು ಮುಟ್ಟಿ ನಮಸ್ಕರಿಸುತ್ತಿರುವುದನ್ನು ಚಿತ್ರಗಳಲ್ಲಿ ನೋಡಬಹುದು. ನಿಮ್ಮ ಸ್ಮೃತಿಪಟಲದಲ್ಲಿ 2018-19 ಸಾಲಿನಲ್ಲಿ ದಾಖಲಾಗಿರುವ ರಾಜಕೀಯ ವಿದ್ಯಮಾನಗಳನ್ನು ಸ್ವಲ್ಪ ಕೆದಕಿ ನೋಡಿ. ಆಗಿನದನ್ನು ಜ್ಞಾಪಿಸಿಕೊಂಡರೆ, ಈಗಿನ ಇಂಥ ಚಿತ್ರಗಳನ್ನು ಊಹಿಸುಕೊಳ್ಳುವುದೂ ಸಾಧ್ಯವಿರಲಿಲ್ಲ. ಆಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರನ್ನು ಪ್ರತಾಪ್ ಸಿಂಹ ಪದೇಪದೆ ತಮ್ಮ ಟ್ವೀಟ್ ಗಳಲ್ಲಿ ಟೀಕಿಸುತ್ತಿದ್ದರು. ಅವರ ಟ್ವೀಟ್ ಗಳಿಗೆ ಕುಮಾರಸ್ವಾಮಿ ಅದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು.