ನವ ದೆಹಲಿ, ಜನವರಿ 12: ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಡ ಮಹಿಳೆಯೊಬ್ಬರು ಸಚಿವರನ್ನು ಭೇಟಿಯಾಗಿ ತಮಗೆ ವಾಸ್ತವ್ಯ ಹೂಡಲು ಮನೆ ನೀಡುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಡಾ. ಮಹದೇವಪ್ಪ ಅವರು ಮಹಿಳೆಗೆ ಮನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ಯಶೋಧಮ್ಮ ಎಂಬುವರು ಸಚಿವರ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಅದರಂತೆ, ಕರ್ನಾಟಕ ಭವನದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸ್ಥಳದಲ್ಲೇ ಆ ಮನವಿಗೆ ಸ್ಪಂದಿಸಿದ ಹೆಚ್.ಸಿ.ಮಹದೇವಪ್ಪ ಅವರು ಸ್ಲಂಬೋರ್ಡ್ ಅಧಿಕಾರಿಗಳಿಗೆ ಕರೆ ಮಾಡಿ ಮಹಿಳೆಗೆ ಮನೆ ನೀಡುವಂತೆ ಸೂಚನೆ ನೀಡಿದರು.