ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಭೀಮ ಆನೆ ಸೇರಿದಂತೆ 30 ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆ ಸೆರೆ ಕಾರ್ಯಾಚರಣೆ ಸಂಬಂಧ ಅಭಿಮನ್ಯು ಮತ್ತು ಆತನ ತಂಡ ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ಕ್ಯಾಂಪ್ ಹಾಕಲಾಗಿದೆ. ಈ ಕ್ಯಾಂಪ್ಗೆ ಕಾಡಾನೆಗಳ ಗ್ಯಾಂಗ್ ರಾತ್ರೋರಾತ್ರಿ ದಾಳಿ ಮಾಡಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಅಭಿಮನ್ಯು ತಂಡದ ಆನೆಗಳ ಕ್ಯಾಂಪ್ ಶಿಫ್ಟ್ ಮಾಡಿದ್ದಾರೆ. ಕಾಡಾನೆಗಳ ಗ್ಯಾಂಗ್ ಆಲದಗುಡ್ಡೆ ಗ್ರಾಮದಿಂದ ಮತ್ತಾವರ ಗ್ರಾಮಕ್ಕೆ ಬಂದು ನೆಲಸಿದೆ.