ಮೈಸೂರು: ಮಂಡ್ಯ ಬಂದ್ಗೆ ಕರೆ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದರೆ ನಾವೇ ಅವರ ಜತೆ ನಿಂತು ಕೊಳ್ಳುತ್ತೇವೆ. ಯಾವ ಪುರುಷಾರ್ಥಕ್ಕೆ ಹೋರಾಟ, ಬಂದ್ ಮಾಡ್ತಿದ್ದಾರೆ? ಬಿಜೆಪಿ – ಜೆಡಿಎಸ್ ಗೆ ನಾಚಿಕೆ ಆಗಬೇಕು. ಬಾಯಿಗೆ ಬಂದ ರೀತಿ ಮಾತಾಡುತ್ತಾರೆ. ನಮಗೆ ಮಾತಾಡುವುದಕ್ಕೆ ನಾಲಿಗೆ ಇಲ್ವ? ಅವ್ರು ಮಂಡ್ಯದ ಮಣ್ಣಿನವರು. ನಮಗೂ ನಾಲಿಗೆ ಇದೆ. ರಾಷ್ಟ್ರ ಧ್ವಜ ತೆಗೀರಿ ಅಂತನ ಈ ಹೋರಾಟ? ಹಿಂದುತ್ವ ಎಂಬುದು ಅವರಿಗಿಂತಾ ನಮಗೆ ಜಾಸ್ತಿ ಇದೆ. ಅವರಿಗಿಂತ ಜಾಸ್ತಿ ಭಕ್ತಿ ನಮಗೆ ಇದೆ. ಅವನು ಯಾರೋ ಪುಟ್ಟರಾಜನೋ ಬೊಮ್ಮಪ್ಪನ ಹಿಡಿದುಕೊಂಡು ಪತ್ರಿಕಾಗೋಷ್ಠಿ ಮಾಡಿಸುತ್ತಾ ನಿಂತರೆ ನಿಮಗೆ ಜನ ಪಾಠ ಕಲಿಸ್ತಾರೆ ಎಚ್ಚರಿಕೆ ಇರಲಿ. ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ. ಜನರೇ ಬಂದ್ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಬಿಜೆಪಿ – ಜೆಡಿಎಸ್ ವಿರುದ್ಧ ಕೆಂಡಾಮಂಡಲರಾದರು.