ಮೈಸೂರು: ಕೆರಗೋಡು ಧ್ವಜ ವಿವಾದ ವಿಚಾರಕ್ಕೆ ಶಾಸಕ ನರೇಂದ್ರ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅನುಮತಿ ಕೇಳಿದವರಿಂದಲೂ ಲೋಪ ಆಗಿದೆ. ಆಡಳಿತಾತ್ಮಕವಾಗಿಯೇ ಕೆಲವು ಲೋಪವಾಗಿದೆ. ಅದನ್ನು ಕೆಲವರು ಪ್ರಚೋದಕಾರಿಯಾಗಿ ಬಳಸುತ್ತಿದ್ದಾರೆ. ನಮಗೆ ರಾಷ್ಟ್ರ ಧ್ವಜ ಮಾತ್ರ ಮುಖ್ಯ. ಧ್ವಜ ಕಂಬದಲ್ಲಿ ಭಗದ್ವಜ ಯಾಕೆ ಹಾಕಲು ಬಿಟ್ಟರು. ಎಲ್ಲಿ ಲೋಪವಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಶಾಂತಿ ಸಭೆ ನಡೆಸಬೇಕಿದೆ. ಶಾಂತಿ ಸಭೆ ಮಾಡಲು ಸದ್ಯಕ್ಕೆ ಕಾಲ ಪಕ್ವವಾಗಿಲ್ಲ. ಶೀಘ್ರದಲ್ಲಿ ಶಾಂತಿ ಸಭೆ ಮಾಡುತ್ತೇವೆ. ನಮಗು ಹಿಂದೂ ಧರ್ಮ, ದೇವರ ಬಗ್ಗೆ ಭಕ್ತಿ ಇದೆ. ನಾವು ಕೂಡ ಪೂಜೆ ಮಾಡಿಯೆ ಮನೆಯಿಂದ ಹೊರಬರುವುದು. ನಾವು ಇವರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳಿಕೆ ನೀಡಿದ್ಧಾರೆ.