ಮಂಡ್ಯ: ದೇಶದಲ್ಲಿ ಮಹಾತ್ಮಾ ಗಾಂಧಿಯನ್ನು ಬಿಟ್ಟರೆ ಕುಮಾರಸ್ವಾಮಿ ಮಾತ್ರ ಸತ್ಯವಂತ ಎಂದು ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷನ ಹೆಸರು ಪ್ರಸ್ತಾಪಿಸದೆ, ಅವರು ಭಾರಿ ಸತ್ಯವಂತರು, ನಮ್ಮ ದೇಶದಲ್ಲಿ ಮಹಾತ್ಮಾ ಗಾಂಧಿಯವರ ನಂತರ ಯಾರಾದರೂ ಸತ್ಯವಂತರಿದ್ದರೆ ಅದು ಅವರು ಮಾತ್ರ ಎಂದರು. ಅವರು ಬಾಯಿಂದ ಕುಮಾರಸ್ವಾಮಿ ಅನ್ನಿಸಬೇಕೆಂಬ ಉದ್ದೇಶದಿಂದ ಪತ್ರಕರ್ತರೊಬ್ಬರು, ‘ಯಾರು ಸರ್?’ ಅಂತ ಕೇಳಿದಾಗ ತಮ್ಮ ಎಂದಿನ ರಾಜಕೀಯ ಪರಿಣಿತಿ ಪ್ರದರ್ಶಿಸಿದ ಚಲುವರಾಯಸ್ವಾಮಿ, ‘ಅದೇ ನೀವು ಹೇಳಿದ್ರಲ್ಲ, ಅವರೇ’ ಅನ್ನುತ್ತಾರೆ! ಅವರು ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಬಗ್ಗೆ ಏನೆಲ್ಲ ಮಾತಾಡುತ್ತಿದ್ದರೋ ಈಗಲೂ ಅದನ್ನೇ ಮಾತಾಡುತ್ತಿದ್ದಾರೆ. ಅವರು ಹೇಳಿದ್ದೆಲ್ಲ ಕರೆಕ್ಟ್ ,ನಾವು ಹೇಳೋದು ತಪ್ಪು. ಅವರಿಗೆ ಯಾರ ಮಾರ್ಗದರ್ಶನವೂ ಬೇಕಿಲ್ಲ, ಒಬ್ಬರೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾರೆ ಎಂದು ಚಲುವರಾಯಸ್ವಾಮಿ ಹೇಳಿದರು.