ಮೈಸೂರು : ಕಾಂಗ್ರೆಸ್ ನಾಯಕರು ಮಾಂಸ ತಿಂದು ಸುತ್ತೂರಿಗೆ ತೆರಳಿದ ವಿಚಾರಕ್ಕೆ ಮೈಸೂರಿನಲ್ಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು ಇದು ಸುಳ್ಳು, ಅವರು ಮಾಂಸ ತಿಂದಿದ್ದನ್ನು ಬಿಜೆಪಿಗರು ಹೋಗಿ ನೋಡಿದ್ರಾ? ಬಿಜೆಪಿಗರಿಗೆ ಈ ರೀತಿ ಸುಳ್ಳು ಹಬ್ಬಿಸೋದು ಬಿಟ್ಟು ಬೇರೇನೂ ಗೊತ್ತಿದೆ. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಬಿಂಬಿಸುತ್ತಾರೆ. ನಿರುದ್ಯೋಗ, ಬಡತನ, ಇಂತಹ ವಿಚಾರಗಳು ಬಿಜೆಪಿಗರ ತಲೆಗೆ ಬರುವುದಿಲ್ಲ.ಅದ್ಯಾವುದೂ ಸುಳ್ಳಿನ ವಿಚಾರಗಳನ್ನು ಇಟ್ಟು ಗಲಾಟೆ ಹಬ್ಬಿಸುವ ಕೆಲಸ ಬಿಜೆಪಿಯಾದ್ದಾಗಿದೆ ಎಂದು ಕಿಡಿಕಾರಿದರು.