ಹಾಸನದಲ್ಲಿ ಕೂಡ ಜನತಾದಳ ಅಭ್ಯರ್ಥಿ ಗೆಲ್ಲಬೇಕು ಎನ್ನುವ ಮೂಲಕ ಅಲ್ಲಿಯೂ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಪರೋಕ್ಷವಾಗಿ ತಿಳಿಸಿದ್ದಾರೆ. ಈ ಮೂಲಕ ಪದೇ ಪದೆ ಅಭ್ಯರ್ಥಿ ಅಂತಿಮ ಆಗಿಲ್ಲ ಎಂಬ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಪ್ರೀತಂಗೌಡ ಯುವಕರಿದ್ದಾರೆ, ಉತ್ಸಾಹದಲ್ಲಿ ಏನೋ ಮಾತನಾಡುತ್ತಾರೆ. ಅವರನ್ನೇ ಕಣಕ್ಕಿಳಿಸುವುದಾದರೆ ಚರ್ಚೆಮಾಡೋಣ. ಅವರೂ ನಾವು ಅಣ್ಣತಮ್ಮರ ರೀತಿ ಹೋಗಬೇಕು ಅಲ್ಲವೇ? ಪಾಪ ಮಾತಿನ ಬಿರುಸಿನಲ್ಲಿ ಮಾತನಾಡುತ್ತಾರೆ, ಸರಿಮಾಡೊಣ ಎಂದು ಕುಮಾರಸ್ವಾಮಿ ಹೇಳಿದರು.