ಶಿವರಾತ್ರಿ ಸಮೀಪಿಸುತ್ತಿದ್ದಂತೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಾದಪ್ಪನ ಸನ್ನಿಧಾನಕ್ಕೆ ಹತ್ತಾರು ಬಯಕೆಯನ್ನ ಹರಕೆ ಹೊತ್ತ ಭಕ್ತರ ಪಾದಯಾತ್ರೆ ಹೆಚ್ಚಾಗುತ್ತಿದೆ. ಮಂಡ್ಯದ ಅಂಚೆದೊಡ್ಡಿಯ ಗ್ರಾಮದ ಜನರು ರೈತರ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗಲಿ ಎಂದು ಮಾದಪ್ಪನ ಸನ್ನಿಧಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಹಿರಿಯರ ಸೂಚನೆಯಂತೆ ಅಂಚೆದೊಡ್ಡಿಯ ಗ್ರಾಮದ ಜನರು ಪಾದಯಾತ್ರೆ ಕೈಗೊಂಡಿದ್ದು ಮಾದಪ್ಪನ ಸನ್ನಿಧಾನದಲ್ಲಿ ವಿವಿಧ ಸೇವೆ ಸಲ್ಲಿಸಲಿದ್ದಾರೆ.