ಸಂದೇಶ್ ಖಾಲಿ ಲೈಂಗಿಕ ದೌರ್ಜನ್ಯ ಹಾಗೂ ಭೂಕಬಳಿಕೆ ಪ್ರಕರಣದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಅವರನ್ನು ಬಂಧಿಸಲಾಗಿದೆ. ಜನವರಿ 5 ರಿಂದ ಜಾರಿ ನಿರ್ದೇಶನಾಲಯ (ಇಡಿ) ತಂಡವು ಟಿಎಂಸಿ ನಾಯಕನ ನಿವಾಸಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಗುಂಪೊಂದು ದಾಳಿ ನಡೆಸಿತ್ತು, ನಂತರ ಶಹಜಹಾನ್ ಶೇಖ್ ಪರಾರಿಯಾಗಿದ್ದರು. ದಾಳಿಯಲ್ಲಿ ಕನಿಷ್ಠ ಮೂವರು ಇಡಿ ಅಧಿಕಾರಿಗಳು ಗಾಯಗೊಂಡಿದ್ದರು. 55 ದಿನಗಳ ನಂತರ ಷಹಜಹಾನ್ ಶೇಖ್ ಬಂಧನವಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಮಿನಾಖಾನ್ನ ಅಜ್ಞಾತ ಸ್ಥಳದಿಂದ 3.00 AM ಸುಮಾರಿಗೆ ಷಹಜಹಾನ್ ಶೇಖ್ ಅವರನ್ನು ಬಂಧಿಸಲಾಯಿತು. ಬಸಿರ್ ಹತ್ಗೆ ಕರೆದೊಯ್ದ ಟಿಎಂಸಿ ನಾಯಕನನ್ನು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.