ಕೋಲಾರ : ಸರ್ಕಾರಿ ಕನ್ನಡ ಶಾಲೆಗಳಿಗೆ ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ. ಹಳೆಯ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗಳು ಉಳಿಸುವ ಕೆಲಸ ನಡೆಯುತ್ತಿದ್ದು ಈ ಕಾರ್ಯಕ್ಕೆ ನನ್ನ ಕೃತಜ್ಞತೆಗಳು ಎಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ತಿಳಿಸಿದ್ರು.
ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಮೇಲೆ ಹಳೆಯ ವಿದ್ಯಾರ್ಥಿಗಳಿಗಿರುವ ಕಾಳಜಿ ಹಾಗೂ ಶೈಕ್ಷಣಿಕೆ ಅಭಿವೃದ್ದಿಗೆ ಅವರ ಕೊಡುಗೆ ಮೆಚ್ಚುವಂತ್ತದ್ದು. ಹಳೆಯ ಕಟ್ಟಡಕ್ಕೆ ಹೊಸ ರೂಪ ಕೊಟ್ಟು ಸುತ್ತಮುತ್ತಲಿನ ಗ್ರಾಮಗಳಿಗೂ ಗ್ರಾಮದ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.
ಹಳೆಯ ವಿದ್ಯಾರ್ಥಿಗಳಗೆ ಯಾವ ಗುರುಗಳು ಶಿಕ್ಷಣ ಕೊಟ್ರೋ ಗೊತ್ತಿಲ್ಲ ನೀವು ಸಾಗುತ್ತಿರುವ ದಿಕ್ಕು ಉತ್ತಮವಾಗಿ, ನಿಮ್ಮ ಆಸಕ್ತಿಗೆ ಅನಂತ ಅನಂತ ಧನ್ಯವಾದಗಳು . ಈಗಾಗಲೆ ಶಾಲೆಯ ಎರಡು ಕೊಠಡಿಗಳು ಅಭಿವೃದ್ದಿಪಡಿಸಲಾಗಿದೆ. ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶೈಕ್ಷಣಿಕ ಚಟುವಟಿಕೆಗಳು ಅತ್ಯತ್ತಮವಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಇಲ್ಲಿನ ಶಿಕ್ಷಕರ ಶ್ರಮ. ಇನ್ನೂ ಖಾಸಗಿ ಶಾಲೆಗಳು ನಾಚುವಂತೆ ಶಾಲೆಯನ್ನ ಅಭಿವೃದ್ದಿಪಡಿಸಿ, ಶಾಲಾ ವಾರ್ಷಿಕೋತ್ಸವವನ್ನ ಆಚರಣೆ ಮಾಡುತ್ತಿರುವುದು ಇತಿಹಾಸವೆ ಸರಿ ಎಂದರು.
ಉಪ ಪ್ರಾಂಶುಪಾಲೆ ರಾಧಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ಯಾಮ ಮೂರ್ತಿ, ಬಿಇಓ ಕಚೇರಿ ಅಧೀಕ್ಷಕ ದೇವರಾಜ್, ಗ್ರಾ ಪಂ ಸದಸ್ಯ ರಾಮೇಗೌಡ ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.