ಬೆಂಗಳೂರು: ರಾಜ್ಯದಲ್ಲಿ ವಿವಿಧ ಸ್ವರೂಪದ ಮಹಿಳಾ ದೌರ್ಜ್ಯನ್ಯ ಪ್ರಕರಣಗಳು ಕಳೆದ 7 ತಿಂಗಳಿನಿಂದ ಹೆಚ್ಚುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಬಲಿಯಾಗ್ತೀದ್ದಾರೆ. ಆದರೆ ರಾಜ್ಯದಲ್ಲಿ ಕಳೆದ ಏಳು ತಿಂಗಳಿನಿಂದ ಮಹಿಳಾ ಅಧ್ಯಕ್ಷರ ನೇಮಕಾತಿ ಮಾಡದ ಹಿನ್ನಲೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರದಾಟ ಶುರುವಾಗಿದೆ. ಕಳೆದ ಏಳು ತಿಂಗಳಿನಿಂದ ಆಯೋಗಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ನಿನ್ನೆಯಷ್ಟೇ ಅಧ್ಯಕ್ಷರನ್ನಾಗಿ ನಾಗಲಕ್ಷ್ಮಿ ಚೌಧರಿಯವರನ್ನ ಆಯ್ಕೆ ಮಾಡಿದೆ. ಆದ್ರೆ ಕಳೆದ ಏಳು ತಿಂಗಳಿನಿಂದ ಕೇಸ್ ಏರಿಕೆಯಿಂದಾಗಿ ದೌರ್ಜನ್ಯಕ್ಕೆ ಹಲ್ಲೆಗೊಳಗಾದ ಮಹಿಳೆಯರು ನ್ಯಾಯಕ್ಕಾಗಿ ಪರದಾಡುವಂತಾಗಿದೆ.
ಈ ಹಿಂದೆ ಇದ್ದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವಧಿ ಮುಕ್ತಾಯದ ಬಳಿಕ ಸರ್ಕಾರ ಬರೊಬ್ಬರಿ ಏಳು ತಿಂಗಳು ಕಾಲ ಯಾರನ್ನ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಮಾಡಿರಲ್ಲಿಲ್ಲ. ಈಗ ಸರ್ಕಾರ ಆಯೋಗಕ್ಕೆ ನಾಗಲಕ್ಷ್ಮಿ ಚೌಧರಿ ಅನ್ನೊವರನ್ನ ಆಯ್ಕೆ ಮಾಡಿದೆ. ಆದ್ರೆ ಇವರು ಈ ಸ್ಥಾನಕ್ಕೆ ಅಹರ್ತೆ ಪಡೆದಿಲ್ಲ. ಕಾನೂನಿನ ಜ್ಞಾನ ಇಲ್ಲದವರನ್ನ ಸರ್ಕಾರ ಆಯೋಗಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಬಗ್ಗೆಯೂ ಆರೋಪ ಕೇಳಿ ಬರ್ತಿದೆ.
ಕಳೆದ 7 ತಿಂಗಳಿಂದ ಮಹಿಳಾ ಆಯೋಗಕ್ಕೆ ಬಂದ ಒಟ್ಟು ದೂರುಗಳು -1749. 1749 ಪ್ರಕರಣಗಳಲ್ಲಿ 1449 ಪ್ರಕರಣ ಮುಕ್ತಾಯ. 291 ಪ್ರಕರಣಗಳು ಪೆಡ್ಡಿಂಗ್. ಪ್ರತಿ ನಿತ್ಯ 10ಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗುತ್ತಿದೆ. ಕಳೆದ 6 ತಿಂಗಳಿನಿಂದ 100ಕ್ಕು ಹೆಚ್ಚು ಪ್ರಕರಣಗಳು ಅಧ್ಯಕ್ಷರಿಲ್ಲದೆ ಪೆಡ್ಡಿಂಗ್. ಕೌಟುಂಬಿಕ ದೌರ್ಜನ್ಯ – 350, ರಕ್ಷಣೆ -481, ಮಹಿಳೆಯರ ಮೇಲಿನ ಹತ್ಯೆ -97, ಸೈಬರ್ ಕ್ರೈಂ ಇತರೆ -580, ವರದಕ್ಷಣೆ ಕಿರುಕುಳ -97, ಕೌಟುಂಬಿಕ ಕಲಹ -23.