ಹೊಳೆನರಸೀಪುರ : ವಿಧಾನಸಭೆ ಚುನಾವಣೆಯಲ್ಲಾದ ಸೋಲಿನಿಂದ ಮೇಲೆದ್ದು ಬರಲು ತಯಾರಾಗಿರೊ ದಳಪತಿಗಳು ಚುನಾವಣೆ ಹೊಸ್ತಿಲಲ್ಲಿ ಭರ್ಜರಿ ಪೂಜೆ ಮೂಲಕ ತಯಾರಿ ಆರಂಭಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಮಾವಿನಕೆರೆ ಬೆಟ್ಟದಲ್ಲಿ ಮೂರು ದಿನಗಳ ಸತತ ಪೂಜೆ ಪುನಸ್ಕಾರ ನಡೆಸಿದ ದೊಡ್ಡಗೌಡರ ಫ್ಯಾಮಿಲಿ ಸಾವಿರದ ಒಂದು ಕುಂಬಾಭಿಷೇಕ ನೆರವೇರಿಸಿದ್ರು. ಪೂಜೆ ಹೋಮ ಹವನಕ್ಕೆ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು. ಪ್ರಮುಖ ನಾಯಕರು, ಕಾರ್ಯಕರ್ತರ ಸಮ್ಮುಖದಲ್ಲಿ ಭರ್ಜರಿ ಪೂಜೆ ನಡೆಸಿದ ದೊಡ್ಡಗೌಡರು ಲೋಕ ಅಖಾಡಕ್ಕೆ ದೈವದ ಆಶೀರ್ವಾದ ಪಡೆದರು.