ಕಲಬುರಗಿ: ಪಾಕಿಸ್ತಾನ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಪಟ್ಟ ಬಂಧಿತರಿಗೆ ಮೈಸೂರು ಪಾಕ್ ತಿನ್ನಿಸಿ ಜೈಲಿಗೆ ಕಳಿಸಲಾಗಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು. ಬಂಧಿತರ ಬಗ್ಗೆ ಮಾತಾಡುವಾಗ, ಅವರಿಗೆ ಮೈಸೂರು ಪಾಕ್ ಕೊಟ್ಟು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಅನ್ನುತ್ತಾರೆ. ಅವರು ಏನು ಹೇಳಹೊರಟಿದ್ದಾರೆ ಅಂತ ನಿಜಕ್ಕೂ ಅರ್ಥವಾಗಲ್ಲ. ಇದು ಗಂಭೀರವಾದ ಪ್ರಕರಣ, ವಿಧಾನ ಸೌಧದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದನ್ನು ಯಾವ ಕಾರಣಕ್ಕೂ ಸಹಿಸಲಾಗದು. ವಿಧಾನ ಸೌಧವೇ ಅಂತಲ್ಲ, ನಾಡಿನ ಯಾವುದೇ ಭಾಗದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರೆ ಅದು ಅತ್ಯಂತ ಕಠಿಣ ಶಿಕ್ಷಾರ್ಹ ಅಪರಾಧ. ಹಾಗಾಗಿ ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಳ್ಳಲಿ. ಮೈಸೂರು ಪಾಕ್ ತಿನ್ನಿಸಿದ್ದಾರೆ ಬಿರಿಯಾನಿ ಕೊಡಿಸಿದ್ದಾರೆ ಅಂತ ಹೇಳುತ್ತಿದ್ದರೆ, ಅದು ಪ್ರಕರಣದ ಗಾಂಭೀರ್ಯವನ್ನು ಕಡಿಮೆ ಮಾಡುವ ಹೇಳಿಕೆಗಳು ಅನಿಸುತ್ತವೆ ಎಂದು ಹೇಳಿದರು.