ಮಂಡ್ಯ : ಸ್ಟಾರ್ ಚಂದ್ರುಗೆ ದೇವರು ಬಲಗಡೆ ಹೂ ನೀಡಿದೆ, ಇದು ಶುಭ ಸೂಚಕ, ಶಿವರಾತ್ರಿ ಹಬ್ಬದಂದೆ ಸ್ಟಾರ್ ಚಂದ್ರು ಅವ್ರಿಗೆ ಪಕ್ಷ ಟಿಕೆಟ್ ನೀಡಿದೆ. ಪಂಚಲಿಂಗ ದರ್ಶನ ಮಾಡ್ತಿದ್ದಂತೆ ದೇವ್ರು ಬಲಗಡೆ ಹೂ ನೀಡಿದೆ. ಪಂಚಲಿಂಗ ಹೂ ಕೊಟ್ಟಿದೆ ಅಂದ್ಮೇಲೆ ಗೆಲುವು ನಮ್ಮದೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿದ್ದಾರೆ. ಮಂಡ್ಯದ ಕೆರಗೋಡಿನಲ್ಲಿ ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಪ್ರಚಾರ ಮಾಡ್ತಿದ್ದೇವೆ. ಚಂದ್ರು ಸೌಮ್ಯ ಸ್ವಭಾವದವ್ರು, ಮಂಡ್ಯದ ಮಣ್ಣಿನ ಮಗ, ಜನ ಅವ್ರಿಗೆ ವೋಟ್ ಮಾಡಬೇಕು ಎಂದರು.
ಕೆರಗೋಡು ಹನುಮ ಧ್ವಜ ವಿವಾದದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವರು ಸುಮ್ಮನೆ ರಾಜಕೀಯ ಮಾಡಿದರು. ನಾವೆಲ್ಲಾ ದೇವರ ಪರಮ ಭಕ್ತರು ಅದನ್ನು ಬೆಳೆಸಲು ನಮಗೂ ಇಷ್ಟ ಇಲ್ಲ. ಟೈಮ್ ಪಾಸ್ಗೆ ನಾಲ್ಕೈದು ಜನ ಆ ರೀತಿ ಮಾಡಿದರು. ಬೆಳಗ್ಗೆ ಎದ್ರೆ ನಾನು ದೇವರ ಜಪ ಮಾಡುವಂತವನು. ಡಾಲಿ ಧನಂಜಯ ನನ್ನ ಆತ್ಮೀಯ ಸ್ನೇಹಿತರು ಕಾರ್ಯಕ್ರಮಕ್ಕೆ ಕರೆದಿದ್ದೆ ಬಂದಿದ್ದಾರೆ. ಅವರನ್ನ ಕೇಳದೆ ಚುನಾವಣೆ ಪ್ರಚಾರ ಅಂತ ಘೋಷಣೆ ಮಾಡೋದು ತಪ್ಪು. ಇನ್ನು ಸಮಯ ಇದೆ ಅವ್ರನ್ನ ಪ್ರಚಾರಕ್ಕೆ ಆಹ್ವಾನ ನೀಡ್ತಿವಿ ಎಂದು ಹೇಳಿದರು.