ಮೈಸೂರು: ಫ್ಲೆಕ್ಸ್ ವಿಚಾರಕ್ಕೆ ಗಲಾಟೆ ನಡೆದು ಪ್ರಶ್ನೆ ಮಾಡಿದ ಮುಸ್ಲಿಂ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿಯ ಮಾದೇಗೌಡ ವೃತ್ತ ಸಮೀಪ ನಡೆದಿದೆ. ಮೂರು ಬೈಕ್ ನಲ್ಲಿ ಬಂದ 6 ಜನರಿಂದ ಕೃತ್ಯ ನಡೆಸಲಾಗಿದ್ದು, ಪಾಲಿಕೆ ಸದಸ್ಯ ನಯಾಜ್ ಪಾಷಾ ಸಹೋದರ ಅಕ್ಮಲ್ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಆದ ನಂತರ ಮೈಸೂರಿಗೆ ಆಗಮಿಸಿದ್ದಅಲ್ತಾಫ್ ಗೆ ಸ್ವಾಗತ ಕೋರಿ ಬಷೀರ್ ಫ್ಲೆಕ್ಸ್ ಅಳವಡಿಸಿದ್ದ. ಇದನ್ನು ಪ್ರಶ್ನೆ ಮಾಡಿ ಪಾಲಿಕೆಗೆ ಮೌಲಾನಾ ಅಕ್ಮಲ್ ದೂರು ನೀಡಿದ್ದರು. ಇದರಿಂದ ಎರಡು ಗುಂಪುಗಳ ನಡುವೆ ನಾಲ್ಕು ದಿನಗಳಿಂದ ಗಲಾಟೆ ನಡೆದಿತ್ತು. ಈ ನಡುವೆ ಅಲ್ತಾಫ್ ಖಾನ್ ವಿರುದ್ಧ ವೀಡಿಯೋ ಮಾಡಿ ಅಕ್ಮಲ್ ಹರಿಹಾಯ್ದಿದ್ದ. ಇದರಿಂದ ಕ್ರೋದಗೊಂಡು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಹಾಗೂ ಮೈಸೂರು ಪಾಲಿಸ ಸದಸ್ಯ ಬಷೀರ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.