ಮೈಸೂರು : ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ನಿಧನಕ್ಕೆ ಮೈಸೂರಿನ ಪತ್ರಕರ್ತರಿಂದ ಸಂತಾಪ ಸಲ್ಲಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ವಾಸು ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಂತಾಪ ಸೂಚಿಸಲಾಯಿತು. ಇನ್ನು ಕಾರ್ಯಕ್ರಮದಲ್ಲಿ ವಾಸು ಪುತ್ರರಾದ ಕವೀಶ್ ಗೌಡ, ರವಿಶ್ ಗೌಡ, ಅವಿಶ್ ಗೌಡ, ಹಿರಿಯ ಪತ್ರಕರ್ತರಾದ ಪ್ರಭುರಾಜನ್, ಕೆ ದೀಪಕ್, ಸತ್ಯನಾರಾಯಣ, ಕೆಪಿ ನಾಗರಾಜ್, ಲೋಕೇಶ್ ಬಾಬು ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.