ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಸುಳಿವು ಸಿಕ್ಕಿರುವ ಬಗ್ಗೆ ಪೊಲೀಸರಿಂದ ಮಾಹಿತಿ ನೀಡಲಾಗಿದೆ. ಬೆಂಗಳೂರಿನ ಬಾಂಬ್ ಬ್ಲಾಸ್ಟ್ ಹಿಂದೆ ಅತಿ ದೊಡ್ಡ ಸಂಚು ನಡೆದಿತ್ತು. ಬೆಂಗಳೂರು ಬಾಂಬರ್ ಐಎಸ್ಐಎಸ್ ಲಿಂಕ್ ಹೊಂದಿದ್ದು, ಅಲಿಹಿಂದ್ ಮಾಡಲ್ ಮೂಲಕ ಸಂಚು ರೂಪಿಸಿದ್ದರು. ಹಿಂದೂ ಮುಖಂಡರೇ ಉಗ್ರರ ಸಂಘಟನೆಗೆ ಟಾರ್ಗೆಟ್ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಟಾರ್ಗೆಟ್ ವಿಫಲಗೊಳಿಸಿದ್ದರು. ಸುದ್ದಗುಂಟೆಪಾಳ್ಯದ ಪ್ರಕರಣದಲ್ಲಿ ಪರಾರಿಯಾಗಿದ್ದ ಕಿರಾತಕರನ್ನು ಅರೆಸ್ಟ್ ಮಾಡಲಾಗಿತ್ತು. ಅಬ್ದುಲ್ ಮತೀನ್, ಮುಸಾಫೀರ್ ಹುಸೇನ್ ಮತ್ತು ಸೈಯದ್ ಅಲಿ ಈ ಹಿಂದೆ ಪ್ರಕರಣದಲ್ಲಿ ಮಿಸ್ ಆಗಿ ಪರಾರಿಯಾಗಿದ್ದರು. ಬೆಂಗಳೂರಿನ ಬ್ಲಾಸ್ಟ್ ಮಾಡಿದವರು ಇವರೇ ಎಂಬ ಶಂಕೆ ವ್ಯಕ್ತವಾಗಿದೆ.
ಶಾಂತಿ ಕದಡುವ ಉದ್ದೇಶದಿಂದಲೇ ಬಾಂಬ್ ಬ್ಲಾಸ್ಟ್ ಮಾಡಲಾಗಿದೆ. ಹಿಂದೂ ಮುಖಂಡರ ಟಾರ್ಗೆಟ್ ಮಾಡಿ ಬ್ಲಾಸ್ಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೆ ಮೂವರ ವಿರುದ್ದ ಸುದ್ದಗುಂಟೆಪಾಳ್ಯದಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.