ಬೆಂಗಳೂರು : ಬಿಜೆಪಿಯಿಂದ ಸ್ಪರ್ಧಿಸಲು ಡಾ. ಸಿ.ಎನ್ ಮಂಜುನಾಥ್ ಗೆ ಒತ್ತಡ ಹಾಕಿದ್ದು ನಾನೇ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎರಡು ಗಂಟೆ ಕಾಲ ತಂದೆಯವರ ಮೇಲೆ ಒತ್ತಡ ಹಾಕಿದ್ದು ನಾನೇ. ಇವತ್ತು ಒಬ್ಬ ವ್ಯಕ್ತಿ ಸಿ.ಎನ್.ಮಂಜುನಾಥ್ ಬಗ್ಗೆ ಮಾತನಾಡಿದ್ದಾರೆ. ಮಂಜುನಾಥ್ ಸಾಧನೆಯ ಮುಂದೆ ಆತ ಉಂಗುಷ್ಟಕ್ಕೂ ಸಮನಲ್ಲ. ಅವರು ಗೆದ್ದಿರಬಹುದು, ಆದರೆ ಅವರ ಸಾಧನೆ ಏನು. ಮಂಜುನಾಥ್ ಬಗ್ಗೆ ನೀಡಿರುವ ಹೇಳಿಕೆ ನನಗೆ ನೋವುಂಟು ಮಾಡಿದೆ. ನಮ್ಮ ಬಗ್ಗೆ ಮಾತನಾಡಿ ರಾಜಕೀಯವಾಗಿ ಎದುರಿಸುತ್ತೇವೆ. ನಮ್ಮ ಬಗ್ಗೆ ಏನಾದರೂ ಮಾತಾಡಿ. ಎಷ್ಟು ಮನೆಗಳನ್ನ ಹಾಳು ಮಾಡಿದ್ದೀರಾ ನೋಡಿದ್ದೀನಿ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ ಎಂದು ಡಿಕೆ ಸುರೇಶ್ ಹೆಸರೇಳದೆ ವಾಗ್ದಾಳಿ ನಡೆಸಿದರು.