ಮೈಸೂರು : ನಾನು ಯಾವುದೇ ಲಾಬಿಯಿಂದ ಬಿಜೆಪಿ ಟಿಕೆಟ್ ಪಡೆದಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ. ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ 1 ವರ್ಷದಿಂದ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇತ್ತು. ಅರಮನೆ ರಾಜ್ಯ ಬಿಜೆಪಿ ಜತೆ ಸದಾ ಸಂಪರ್ಕದಲ್ಲಿತ್ತು. ನನ್ನ ಸಿದ್ದಾಂತ ಅಭಿವೃದ್ದಿ ದೃಷ್ಠಿಕೋನ ನೋಡಿದಾಗ ಬಿಜೆಪಿ ಕಡೆ ಇತ್ತು. ರಾಜಕಾರಣದ ಆಳ ಅಗಲ ಅರಿತು ರಾಜಕಾರಣಕ್ಕೆ ಬಂದಿದ್ದೇನೆ. ಸಮಾಜದಲ್ಲಿ ಅಭಿವೃದ್ದಿ ತರಬೇಕಾದರೇ ರಾಜಕಾರಣವೇ ಮಾರ್ಗ ಎಂದು ಹೇಳಿದರು.